ಒಡಲ ಕಿಚ್ಚಿನ ಹಿಲಾಲು ಹಿಡಿದು

Author : ನಾಗೇಶ್ ಜೆ. ನಾಯಕ

Pages 105

₹ 125.00




Year of Publication: 2018
Published by: ಒನ್ ವೀಲರ್ ಪ್ರಕಾಶನ
Address: ಮಣಿಪಾಲ (ಉಡುಪಿ ಜಿಲ್ಲೆ)

Synopsys

`ಒಡಲ ಕಿಚ್ಚಿನ ಹಿಲಾಲು ಹಿಡಿದು’ ನಾಗೇಶ್ ಜೆ. ನಾಯಕ ಅವರ ಕವನ ಸಂಕಲನವಾಗಿದೆ. ಇದಕ್ಕೆ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹವಿದೆ; ಈ ಸಂಕಲನದ ಗಜಲ್ ರೀತಿಯ ಪದ್ಯಗಳು ನಾಗೇಶ್ ನಾಯಕ ಅವರು ಒಬ್ಬ ಅಪ್ಪಟ ಕವಿ ಎನ್ನುವುದನ್ನು ಖಾತ್ರಿಮಾಡುತ್ತಲೇ ಕನ್ನಡ ಕಾವ್ಯಕ್ಕೆ ತನ್ನ ಹೆಜ್ಜೆಗಳನ್ನು ಉಳಿಸಿಹೋಗಬಹುದಾದ ಭರವಸೆಗಳೂ ಇಲ್ಲಿ ಕಾಣಸಿಗುತ್ತವೆ. 'ನಿಮಗಿದೋ ಕೊನೆಯ ನಮಸ್ಕಾರ', 'ನಗುವವರು ಕಡಿಮೆ ಈ ಲೋಕದಲ್ಲಿ', 'ಉಸಿರಾಡುವ ಶವವಾಗಿದ್ದೇನೆ ಸ್ವಾಮಿ' ಹೀಗೆ ಈ ಗಜಲ್‌ಗಳು ಆಪ್ತವೆನಿಸುತ್ತವೆ. 'ಬೆನ್ನಿಗಿರಿದ ಚೂರಿ ಮರುಗುತಿದೆ' ಎನ್ನುವ ಪದ್ಯದಲ್ಲ... "ನೀ ನಡೆದ ಹಾದಿಯ ತುಂಬಾ ಹೂಗಳ ಸುರಿದದ್ದು ಸಾಕು ಮೆಟ್ಟಿಲಾದ ನಾವು ಒಟ್ಟಾಗಿ ಒಳ ಮರ್ಮ ಬೇಧಿಸಬೇಕಿದೆ ಗೆಳೆಯ" ಎನ್ನುವ ಸಾಲುಗಳು ನೊಂದವರೆಲ್ಲಾ ಒಂದಾಗುವಿಕೆಗೆ ಕರೆ ಕೊಡುವಲ್ಲಿ ಈ ಕವಿತೆ ಯಶಸ್ವಿಯಾಗಿದೆ. ನಾಗೇಶ್ ನಾಯಕ ಅವರ ಒಟ್ಟು ಈ ಸಂಕಲನ ಸಾಮಾಜಕ ಶಸ್ತ್ರಚಿಕಿತ್ಸೆ ಆಗಬೇಕಾಗಿರುವ ತನ್ನ ಅಸಹನೆಯನ್ನು ತೋಡಿಕೊಳ್ಳುತ್ತಲೇ ಸಮಸಮಾಜಕ್ಕಾಗಿ ತಲ್ಲಣಿಸುವ ಮನಸ್ಸು ಈ ಸಂಕಲನದ ಕಾವ್ಯಕ್ಕಿದೆ. ನಿಮ್ಮ ಈ 'ಒಡಲ ಕಿಚ್ಚಿನ ಹಿಲಾಲು' ಎಲ್ಲರೂ ಹಿಡಿದು ನಡೆಯಲಾರಂಭಿಸಿದರೆ ಅಲ್ಲಿ ನಮ್ಮ ಹಾದಿಗಳು ನಿಚ್ಚಳವಾಗುತ್ತವೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books