ಪ್ರವೀಣ್ ಬಿ.ಎಂ ಅವರ ಕಾವ್ಯಗಳನ್ನೊಳಗೊಂಡ ಪುಸ್ತಕವೇ “ನೆಲದ ಹುಣ್ಣು”. ಈ ಸಂಕಲನದಲ್ಲಿ ಮೂವತ್ತೊಂಬತ್ತು ಕವಿತೆಗಳಿವೆ. ಇಲ್ಲಿಯ ಎಲ್ಲಾ ಕವಿತೆಗಳೂ ವಾಚ್ಯದ ಸಾಧಾರಣ ಗುಣವನ್ನು ಮೀರಿ ಸೂಚವೂ ಧ್ವನಿಪೂರ್ಣವೂ ಆದ ಬಂಧುರ ರಚನೆಗಳಾಗಿರುವುದೊಂದು ವಿಶೇಷ. ಸಮಾಜದಲ್ಲಿ ಸರ್ವತ್ರ ಸಾಂಕ್ರಾಮಿಕ ರೋಗದಂತೆ ಹರಡಿರುವ ಕೊಳಕುತನದ ವಾಸ್ತವ ಸ್ಥಿತಿಯನ್ನು ವರ್ಣಿಸುತ್ತಲೇ ಮನುಷ್ಯನ ಬಹುಮುಖಿಯಾದ ಧೂರ್ತತನ ಬಯಲಾಗುವ ಕಾಲ ಹತ್ತಿರ ಬರುತ್ತಿದೆ. ಆಗಲಾದರೂ ಮನುಕುಲದ ನೋವು ಸಂಕಟಗಳ ಅಬ್ಬರ ಕಡಿಮೆಯಾಗಿ ನೆಲದ ಹುಣ್ಣು ಮಾಯಬಹುದೆಂಬ ಆಶಾವಾದ ಕವಿತೆಯಲ್ಲಿ ಸಣ್ಣ ಬೆಳಕಾಗಿ ಮಿನುಗುತಿದೆ.
ಕವಿ ಪ್ರವೀಣ್ ಬಿ.ಎಂ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಿಳಸನೂರಿನವರು. 1983 ಮಾರ್ಚ್ 10 ರಂದು ಜನನ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಬುಗುರಿ (ನಿ.ಮೈಮ್ ರಮೇಶ್), ನಿರಾಕರಣ (ನಿ.ಮೈಮ್ ರಮೇಶ್), ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್ (ನಿ.ಮೈಮ್ ರಮೇಶ್), ಹೆಣದ ಬಟ್ಟೆ (ಪ್ರೇಮಚಂದ್ರ ಕಾದಂಬರಿ ಆಧಾರಿತ, ನಿರ್ದೇಶನ ಜನ್ನಿ), ಜಲಗಾರ (ನಿ. ಕೃಷ್ಣ ಜನಮನ), ಸಾಂಬಶಿವ ಪ್ರಹಸನ(ಡಾ.ಚಂದ್ರಶೇಖರ ಕಂಬಾರ, ನಿ.ಶೇಖ್ ಅಹಮದ್) ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಕೃತಿಗಳು: ನೆಲಮುಟ್ಟದ ಕೂಗು, ನೆಲದ ಹುಣ್ಣು, ಮಾತಿಲ್ಲ ಗುರುತು ಇದೆ ...
READ MORE