ಬ್ರೆಕ್ಟ್ ಕವನಗಳ ಓದು

Author : ಸಿ.ಪಿ. ನಾಗರಾಜ

Pages 122

₹ 150.00




Year of Publication: 2024
Published by: ನಾಗು ಸ್ಮಾರಕ ಪ್ರಕಾಶನ
Address: ಆರ್.ವಿ.ಕಾಲೇಜು ಪೋಸ್ಟ್, ಬೆಂಗಳೂರು.
Phone: 9986347521

Synopsys

‘ಬ್ರೆಕ್ಟ್ ಕವನಗಳ ಓದು’ ಸಿ.ಪಿ ನಾಗರಾಜ ಅವರು ಬ್ರೆಕ್ಟ್ ಕವನಗಳಿಗೆ ಬರೆದ ಟಿಪ್ಪಣಿಯಾಗಿದೆ. ಕೃತಿಗೆ ಕೇಶವ ಮಳಗಿ ಅವರು ಮುನ್ನುಡಿ ಬರೆದಿದ್ದು, ಮುನ್ನುಡಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಪ್ರತಿ ಕವಿತೆಯ ಉದ್ದೇಶ, ಧೋರಣೆ ಏನಾಗಿರಬಹುದು ಎಂಬ ಸಾಮಾನ್ಯ ಅಂಶವನ್ನು ಇಟ್ಟುಕೊಂಡು ಇಲ್ಲಿನ ಕವಿತೆಗಳನ್ನು ನಾಗರಾಜ್ ಅವರು ವಿವರಿಸಲು, ವಿಶ್ಲೇಷಣೆಗೆ ಒಳಪಡಿಸಲು ಯತ್ನಿಸಿದ್ದಾರೆ. ಆಯಾ ಕವಿತೆಯಲ್ಲಿ ಮುಖ್ಯವೆನ್ನಿಸುವ ಸಾಲುಗಳ ಸ್ವಾರಸ್ಯವನ್ನು ವಿವರಿಸಲು ಯತ್ನಸಿದ್ದಾರೆ. ಹೀಗೆ ಮಾಡುವಾಗ ಓದುಗರಿಗೆ ಈವರೆಗೂ ತಿಳಿದಿರದ ಸಂಗತಿಗಳು ಅರಿವಿಗೆ ಬರಬಹುದು. ಇಲ್ಲಿ ಸ್ಯಾಮಿನಾಥನ್ ಅವರ ವಿಚಾರಗಳ ಪ್ರಸ್ತಾಪವೂ ಇದೆ. ಇದರಿಂದಾಗಿ ಕವಿತೆಯ ವಿಶ್ಲೇಷಣೆಗೆ ಒಂದು ಭಾರತೀಯ ಸಂದರ್‍ಭ ಪ್ರಾಪ್ತವಾಗಿದೆ. ಅದೇ ರೀತಿ ‘ಬೇಬಿಲಾನ್ ನಗರ’, ‘ಲೀಮಾ ನಗರ’, ‘ಚೀನಾದ ದೊಡ್ಡಗೋಡೆ’, ‘ಬೈಜ್ಹಾಂಟಿಯಮ್ ಸಾಮ್ರಾಜ್ಯ’, ವಿವರಣೆ, ‘ಪುಸ್ತಕ ದಹನ’ ಕವಿತೆಗೆ ನೀಡಿರುವ ಟಿಪ್ಪಣಿಗಳೂ. ಇಂತಹ ಅನೇಕ ಸಂಗತಿಗಳು ಕವಿತೆಗಳ ವಿಶ್ಲೇಷಣೆಯಲ್ಲಿ ದೊರಕುತ್ತವೆ. ಅದು ಹೊಸ ಓದುಗನಿಗೆ ಪ್ರಯೋಜನಕಾರಿಯಾಗಿದೆ.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books