‘ಹುಟ್ಟಲಿರುವ ನಾಳೆಗಾಗಿ’ ಕೆ.ಎನ್. ಲಾವಣ್ಯಪ್ರಭ ಅವರ ಕವನ ಸಂಕಲನ. ಕವಿತೆ ಬರೆದ ಅನುಭವದ ಕುರಿತು ಹೇಳುತ್ತಾ.. ‘ಹದಿನಾರು, ಹದಿನೇಳು ವರ್ಷಗಳಿಂದ ಮೊನ್ನೆ ಮೊನ್ನೆಯ ತನಕ ಬರೆದ ಕವಿತೆಗಳಿಲ್ಲಿವೆ. ನನ್ನ ಸೂಕ್ಷ್ಮಾತಿ ಸೂಕ್ಷ್ಮ ಭಾವಗಳಿಗೊಂದು ಮಾತಿನ ನೆಲೆಗಿಂತ ಮಿಗಿಲಾದ ನೆಲೆ ಬೇಕಾಗಿತ್ತು. ಕವಿತೆಯಾಗಿ ಓಲೈಸತೊಡಗಿತು. ಇನ್ನೊಂದಿಷ್ಟು ಗಟ್ಟಿಯಾಗಬೇಕಾದ ಆಳ, ವಿಸ್ತಾರ ಕಡಿಮೆ ಇರುವ ಕವಿತೆಗಳ ಜೊತೆ ಕವಿತೆಯ ಅಂಶ ಉಳಿಸಿಕೊಂಡಿರುವ ಕವಿತೆಗಳೂ ಇಲ್ಲಿವೆ ಎಂಬ ಭರವಸೆಯಿದೆ ಎಂದಿದ್ದಾರೆ ಲಾವಣ್ಯಪ್ರಭ. ಹಾಗೇ ಬರಹ ದಿನೇ ದಿನೇ ಕಡಿಮೆಯಾದಂತಾದಾಗ, ಈಗಾಗಲೇ ಬರೆದು ಚೆಲ್ಲಾಡಿದ್ದ ನನ್ನೊಡಲಲ್ಲಿ ಹುಟ್ಟಿ ನನಗೊಂದು ವ್ಯಕ್ತಿತ್ವ ತಂದಿಟ್ಟ ಕವಿತೆಯ ಕಂದಮ್ಮಗಳಿಗೊಂದು ಗೂಡು ಸೇರಿಸುವ ತವಕವೇ ಈ ಸಂಕಲನಕ್ಕೆ ಪ್ರೇರಣೆ ಎಂದಿದ್ದಾರೆ. ಈ ಕೃತಿಗೆ ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮುನ್ನುಡಿ ಬರಹವಿದೆ.
ಕವಿ ಕೆ. ಎನ್. ಲಾವಣ್ಯ ಪ್ರಭ ಅವರು ಮೂಲತಃ ಮೈಸೂರಿನವರು. ಅವರು 1971 ನವೆಂಬರ್ 02ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ. ಆರ್. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಅವರು ‘ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ’ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ ಗಳಿಸಿದ್ದಾರೆ. ಇವರ ಹಲವಾರು ಕವಿತೆಗಳು ಕನ್ನಡದ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ನದಿ ಧ್ಯಾನದಲ್ಲಿದೆ’, ‘ಹುಟ್ಟಲಿರುವ ನಾಳೆಗಾಗಿ’, ‘ಗೋಡೆಗಿಡ’ ಅವರ ಕವನ ಸಂಕಲನಗಳು. ಸಂಶೋಧನಾ ಪ್ರಬಂಧ ಅವರ ಕವನ ಸಂಕಲನ. ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ಕಾವ್ಯ ...
READ MORE