‘ಕಾಯುತ್ತಾ ಕವಿತೆ’ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೊಡೆ ಅವರ ಕವನ ಸಂಕಲನ. ಕಾಡುವ ಪ್ರೀತಿ, ಪ್ರಕೃತಿ, ಬದುಕು, ಕನಸು, ಗಂಡು-ಹೆಣ್ಣೊಲವು, ನೆನಪುಗಳು, ಸಾಂದರ್ಭಿಕ ಪ್ರಕರಣಗಳೇ ಕವಿತೆಗಳ ಕೇಂದ್ರ ಬಿಂದುಗಳಾಗಿವೆ. ಅಲ್ಲಲ್ಲಿ ಒಡಮೂಡುವ ವಿಷಾದ, ನೋವುಗಳನ್ನು ಬದಿಗೆ ಸರಿಸಿ ಬದುಕಿನ ಪ್ರೀತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕವಿಯನ್ನು ಕಾಡಬಹುದಾದ ಅನೇಕ ವಿಷಯಗಳು ಅವರ ಪರಿಸರದಲ್ಲಿವೆ. ಅವನ್ನು ಸಮರ್ಥವಾಗಿ ಕಾವ್ಯ ಮುಖೇನ ದುಡಿಸಿಕೊಳ್ಳುವ ಅವಕಾಶಗಳೂ ಅವರ ಮುಂದಿವೆ. ಇಲ್ಲಿಯ ಕವಿತೆಗಳಲ್ಲಿ ವಾಚ್ಯತೆ, ಭಾವತೀವ್ರತೆ ತುಸು ಹೆಚ್ಚೇ ಇದ್ದರೂ ಕಾವ್ಯಲೋಕದಲ್ಲಿ ಭರವಸೆಯನ್ನು ಮೂಡಿಸುವ ಕವಿತೆಗಳನ್ನು ಕಾಣಬಹುದಾಗಿದೆ.
ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್ವರ್ಕ್ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ...
READ MORE