ಇತ್ತೀಚೆಗಷ್ಟೇ ಬಿಡುಗಡೆಯಾದ ಪದ್ಮಾವತಿ ಚಂದ್ರು ಅವರ ಸಂಪಾದಕತ್ವದಲ್ಲಿ ಹಾಗೂ ಶುಭಾ ಶ್ರೀನಾಥ್ ಅವರ ಸಹ ಸಂಪದಾಕತ್ವದಲ್ಲಿ ಅನಾವರಣಗೊಂಡ “ಸ್ಪಂದನ” ಕೃತಿ ಹತ್ತು ಲೇಖಕಿಯರ ಲೇಖನಗಳ ಕಥಾ ಗುಚ್ಛ ಅತ್ಯುತ್ತಮವಾಗಿ ಮೂಡಿ ಬಂದಿರುವ ಪುಸ್ತಕ ಕೃತಿ. ಹತ್ತು ವಿವಿಧ ಲೇಖಕಿಯರ ಲೇಖನ ಹತ್ತು ವಿಧದ ಬಣ್ಣದ ಹೂಗಳಿಂದ ಸಮ್ಮಿಳಿತವಾದ ಹೂಗುಚ್ಚದಂತೆಯೇ ಇದೆ. ಹೆಸರಿಗೆ ತಕ್ಕಂತೆ ಸ್ಪಂದನೆ ಓದುಗರಲ್ಲೆರ ಮನಸ್ಸನ್ನು ತಟ್ಟುವುದು ಸುಳ್ಳಲ್ಲ. ಶ್ರೀಮತಿ ಅಚಲ ಬಿ ಹೆನ್ಲೀ , ಆಶ್ರಿತ ಕಿರಣ್ ,ಗಾಯತ್ರಿ ಅನಂತ್, ರಶ್ಮಿ ಪ್ರಶಾಂತ್, ಶಾರದ ವೀರೇಶ್ ಶೆಟ್ಟಿ,ಶಶಿ ಶಂಕರ್ ,ಶುಭಾ ಶ್ರೀನಾಥ್, ಸಂಧ್ಯಾ ಶ್ಯಾಮ್ ಭಟ್ , ಉಷಾ ಜಯರಾಂ ಹಾಗೂ ವೀಣಾ ರಮೇಶ್ ಅವರ ಆಯ್ದ ಕಥೆಗಳ ಸಂಕಲನವೇ ಸ್ಪಂದನ.
ಲೇಖಕಿ, ಕವಯತ್ರಿ ಪದ್ಮಾವತಿ ಚಂದ್ರು ಅವರು ಕನ್ನಡದಲ್ಲಿ ಹಲವಾರು ಹನಿಗವನಗಳ ಸಂಕಲನಗಳನ್ನು ಹೊರತಂದಿದ್ದಾರೆ. “ಬೆಳದಿಂಗಳಾಗಿ ಬಾ, ಹನಿ ಹನಿ ಇಬ್ಬನಿ” ಅವರ ಹನಿಗವನ ಸಂಕಲನ. ’ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ, ಹಾಸ್ಯ ಪ್ರತಿಭಾ ಸ್ಪರ್ಧೆಯಲ್ಲಿ - ಪ್ರಥಮ ಬಹುಮಾನ’ ಸಂದಿದೆ. ...
READ MORE