ಸಂಸ್ಕೃತಿ ಮೀಮಾಂಸೆ

Author : ಎಸ್. ನಟರಾಜ ಬೂದಾಳು

Pages 255

₹ 195.00




Year of Publication: 2020
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

‘ಸಂಸ್ಕೃತಿ ಮೀಮಾಂಸೆ’ ಎಸ್‌. ನಟರಾಜ ಬೂದಾಳ ಅವರ ಕನ್ನಡ ಸಂಸ್ಕೃತಿ ಮೀಮಾಂಸೆಯನ್ನೊಳಗೊಂಡ ಲೇಖನ ಸಂಕಲನವಾಗಿದೆ. ನಮ್ಮಲ್ಲಿ ಕಾವ್ಯ ಎನ್ನುವ ಪದಕ್ಕೆ ಈ ಹೊತ್ತಿನ ಅರ್ಥವೇ ಎಂದಿಗೂ ಇದ್ದಿರಲಿಲ್ಲ. ಕಾವ್ಯದ ಜಾಗದಲ್ಲಿ ದರ್ಶನ, ಮೀಮಾಂಸೆಗಳೂ ಕುಳಿತು ಬಂದಿವೆ. ರಾಜಕೀಯ ಮತ್ತು ಸಮಾಜೋ ಧಾರ್ಮಿಕ ಕೇಂದ್ರಗಳು ಕಾಲಕಾಲಕ್ಕೆ ಕಾವ್ಯದ ಜಾಗದಲ್ಲಿ ಇವುಗಳನ್ನೂ ಕೂರಿಸಿವೆ. ಇವುಗಳಲ್ಲಿ ಯಾವೊಂದೂ ಏಕಾಕಿ ಸಂಗತಿಗಳಲ್ಲ. ಎಲ್ಲವೂ ಪರಸ್ಪರಾವಲಂಬಿಗಳು. ನಾವು ಬದುಕುತ್ತಿರುವ ಆವರಣದ ಸಾಂಸ್ಕೃತಿಕ ಸಂಗತಿಗಳನ್ನು ಈ ಪುಸ್ತಕ ದಲ್ಲಿ ಸಂಗ್ರಹಿತವಾಗಿರುವ ಲೇಖನಗಳಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ. ಇವೆಲ್ಲ ಚರ್ಚೆಗೆ ಒಡ್ಡಿಕೊಂಡಿರುವ ಮುಕ್ತ ಬರಹಗಳು. ಈ ಲೇಖನಗಳು ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಂಡಿವೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books