"ಅರಿವಿನ ಜಾಡು' ಎಂಬ ಲೇಖನಗಳ ಸಂಚಯ ಕೃತಿಯ ಮುಖೇನ ಎ೦ದಿಗಿಂತ ವರ್ತಮಾನದ ಸಮಾಜಕ್ಕೆ ಅಗತ್ಯವೆಂದೆಣಿಸಿ, ಹೆಚ್ಚ ನಮ್ಮ 'ಅನುಭಾವ' ಹೇಳಿಕೊಡುವ 'ಅರಿವು' ಎಂಬ ಜೀವನದ ನಿಜ ಅಸ್ತಿತ್ವ-ಅನುಭೂತಿ ಶಕ್ತಿಯ ಅರಿವನ್ನು ಅರಿವಾಗಿಸಲು ಪ್ರಯತ್ನಿಸಿದ್ದಾರೆ. ಮುಳಗುಂದ ಪರಿಸರದ ಕಾಲಭೈರವ ಪರಂಪರೆಯ ದರ್ಶನದೊಂದಿಗೆ ದೇವಾಲಯಗಳ ಜೀರ್ಣೋದ್ದಾರ, ನಿರ್ವಹಣೆಯ ಕುರಿತು ಯುವ ಬರಹಗಾರನ ಕಾಳಜಿ ಇಲ್ಲಿ ವ್ಯಕ್ತವಾಗಿದೆ. ಆಧುನಿಕ ಸಾಹಿತ್ಯದಲ್ಲೊಂದು ಸುತ್ತು ಹೊಡೆಸಿ, ಆಯಾ ಕಾಲಘಟ್ಟದ ಸಾಹಿತ್ಯ ಕಲಿಸಿಕೊಟ್ಟ ಮೌಲ್ಯಗಳ ಅರಿಯುವಿಕೆ ನಿಲ್ಲಬಾರದೆಂಬುದು ಯುವಮನಸ್ಸಿನ ಆಶಯವಾಗಿದೆ. ಕರ್ನಾಟಕ ಏಕೀಕರಣದ ದನಿ ಆಲೂರರ ಸೇವೆಯನ್ನು ಮರೆಯಬೇಡಿರೆಂದು ಕನ್ನಡ ಮನಸ್ಸುಗಳ ಎಚ್ಚರಿಸುವ ಹಂಬಲ ದಾವಲಸಾಬ ಅವರದು. ಕೊನೆಯಲ್ಲಿ 'ಮೀ ರಕ್ಷಂ' ಚಿತ್ರವೊಂದರ 'ಕಲೆ ಯಾವ ಧರ್ಮ, ಜಾತಿಯ ಸೊತ್ತಲ್ಲ; ಅದು ಕಲಿಯುವವನ, ಕಲಿತವನ ಸೊತ್ತು' ಎಂಬ ಸಂದೇಶವನ್ನಿಟ್ಟುಕೊಂಡು ಸಮಾಜದ ಕೋಮುವಾದಿತ್ವ, ಅವಕಾಶವಾದಿತ್ವ, ಮೂಲಭೂತವಾದಿತ್ವ ಶಕ್ತಿಗಳ ವಿರುದ್ಧ ಲೇಖಕರ ಮೃದುವಾದ ಪ್ರತಿಭಟನೆಯಿದೆ. ಹೀಗೆ ಸಮುದಾಯ ಸಾಮರಸ್ಯ, ಭಾವೈಕ್ಯತೆ, ದೇಶದ ಬಹುತ್ವದ ಬಗೆಗಿರುವ ಕಾಳಜಿ ಒಂದೆಡೆಯಾದರೆ, ಇವುಗಳ ಯಶಸ್ಸಿಗೆ ಭಂಗ ತರುವ ಕಾಣದ ಕೈಗಳ ಆತಂಕವೂ ಲೇಖಕರಿಗಿದೆ.
ಲೇಖಕ ದಾವಲಸಾಬ ನರಗುಂದ ಮೂಲತಃ ಗದಗ ಜಿಲ್ಲೆಯ ನರಗುಂದದವರು. 1994 ಜುಲೈ 09 ರಂದು ಜನನ. ತಂದೆ ಮೀರಾಸಾಬ ತಾಯಿ ಬೀಬಿಜಾನ್. . ಕಾವ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಅನುವಾದ, ಸಂಪಾದನೆ ಈ ಪ್ರಕಾರಗಳಲ್ಲಿ 02 ಕೃತಿಗಳನ್ನು ಪ್ರಕಟಿಸಿದ್ದಾರೆ. ತತ್ವಪದಗಳ ರಚನೆ ಇವರ ಹವ್ಯಾಸ. 'ಕಡಕೋಳ ಮಡಿವಾಳಪ್ಪ ಮತ್ತು ಶಿಶುನಾಳ ಶರೀಫ: ತೌಲನಿಕ ಅಧ್ಯಯನ' ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿದ್ದಾರೆ. ಕೃತಿಗಳು: ತೂಗುತಿದೆ ನಿಜ ಬಯಲಲಿ, ಅರಿವಿನ ಜಾಡು ...
READ MORE