‘ಸಂವೀಕ್ಷಣೆ' ಕೃತಿಯು ಡಾ. ರಘುಶಂಖ ಭಾತಂಬ್ರಾ ಅವರ ವಿಮರ್ಶಾತ್ಮಕ ಬರಹಗಳ ಸಂಕಲನಾಗಿದೆ. ಈ ಪುಸ್ತಕ ತಾನು ನೆಲೆನಿಂತ ಬೀದರ ಪ್ರದೇಶದೊಂದಿಗೆ ಇಡೀ ಹೈದರಾಬಾದ ಕರ್ನಾಟಕವನ್ನು ಸ್ಥೂಲವಾಗಿ ಸಾಹಿತ್ಯ ಮತ್ತು ಚರಿತ್ರೆಯ ಕಣ್ಣೋಟದಲ್ಲಿ ನೋಡುವ ಕ್ರಮದಿಂದ ಕೂಡಿದೆ. ಇಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡ ಲಿಗಾಡೆ, ಪಟ್ಟದೇವರು, ಶರಣಬಸವಪ್ಪ ಅಪ್ಪ ಅವರ ಕುರಿತ ಲೇಖನಗಳಿವೆ. ಬೀದರ ಜಿಲ್ಲೆಯನ್ನು ಮುಖ್ಯವಾಗಿಸಿಕೊಂಡು ಸಂಶೋಧನೆ, ಕಾದಂಬರಿ, ಸೂಫಿತನ ಹಾಗೂ ಆಧುನಿಕ ವಚನದ ಕುರಿತಾದ ಕೆಲವು ಬರಹಗಳಿವೆ. ಎಂ.ಎಂ.ಕಲ್ಬುರ್ಗಿ ಆದಿಯಾಗಿ ಜಿಲ್ಲೆಯ ಹಾಗೂ ನಾಡಿನ ಹೆಸರಾಂತ ಬರಹಗಾರರ ಪುಸ್ತಕಗಳನ್ನು, ಲೇಖನಗಳನ್ನು ಭಾತಂಬ್ರಾ ಅವರು ತಮ್ಮ ಕಣ್ಣೋಟದ ಮೂಲಕ ವಿಮರ್ಶೆಗೊಳಪಡಿಸಿದ್ದಾರೆ. ಜೊತೆಗೆ ಕೆಲವು ಬಹುಮುಖ್ಯ ಕೃತಿಗಳ ಸಮೀಕ್ಷೆಗಳೂ ಇಲ್ಲಿವೆ.
“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್; ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...
READ MORE