‘ಅತಿಮಾನುಷ’ ಗುರುರಾಜ ಕೊಡ್ಕಣಿ ಅವರ ಮೂರನೆಯ ಕಾದಂಬರಿ. ಮೊದಲೆರಡು ಕಾದಂಬರಿ ಗಳಂತೆಯೇ ಇದರ ಕಥಾವಸ್ತು ಕೂಡ ಹಾರರ್ ಥ್ರಿಲ್ಲರ್. ಯಾವುದೋ ಸಿದ್ಧಾಂತ, ಫಿಲಾಸಫಿಗಳ ಹಂಗಿಲ್ಲದ ಶುದ್ಧಾನುಶುದ್ಧ ಮನೋರಂಜನೆ ಮಾತ್ರವೇ ಈ ಕಾದಂಬರಿಯ ಉದ್ದೇಶ. ಸಾವು, ನೋವು, ಸೇಡು, ಮಾಟ ಮಂತ್ರ, ನಿಗೂಢತೆಯನ್ನು ಭೇದಿಸುವ ಪ್ರಯತ್ನ, ಕೌಟುಂಬಿಕ ಕಲಹ, ಮನೋವಿಜ್ಞಾನ ಹೀಗೆ ಇಂತಹ ಕಥೆಯಲ್ಲಿ ಏನೇನಿರಬೇಕೋ ಅದೆಲ್ಲವೂ ಸೂಕ್ತವಾಗಿ ಹೊಂದಿಕೆಯಾಗುವ ಕಥಾವಸ್ತು ಇಲ್ಲಿದೆ. ವರ್ತಮಾನದ ತಲ್ಲಣಗಳಿವೆ ಇತಿಹಾಸದ ಬೇರುಗಳಿವೆ. ಅವು ಕಗ್ಗಂಟಾಗಿವೆ. ಇದನ್ನು ರೋಚಕವಾಗಿ ಬಿಡಿಸುತ್ತಲೇ ಕಥೆ ಕುತೂಹಲಕರವಾಗಿ ಬೆಳೆಯುತ್ತದೆ. ಅಧ್ಯಾಯದಿಂದ ಅಧ್ಯಾಯಕ್ಕೆ ನಿಗೂಢತೆಯ ಕಡೆಗೆ ಸಾಗುವ ಪರ್ವನ ಪಾತ್ರದಂತೆ, ನಾಗವೇಣಿ ಪಾತ್ರ ಕೂಡ ಕಾಡುತ್ತದೆ. ಅಂಚಿನಲ್ಲಿ ಬಂದಿಳಿಯುವ ಸಂಧ್ಯಾ ಕೂಡ ಓದುಗರ ಸಹಾನುಭೂತಿಗೆ ಪಾತ್ರರಾಗುತ್ತಾಳೆ. ಹಾಗೆ ನೋಡಿದರೆ ಗಟ್ಟಿಯಾದ ಪಾತ್ರ ಚಿತ್ರಣವೇ ಈ ಕಾದಂಬರಿಯ ಜೀವಾಳ ಎನ್ನ ಬಹುದು.
ಗುರುರಾಜ ಕೊಡ್ಕಣಿ ಚಿಂತಕರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಶತಕಂಪಿನೀ, ವಿಕ್ಷಿಪ್ತ, ಪ್ರತಿಜ್ಞೆ ಇವು ಅವರ ಕಾದಂಬರಿಗಳು. ...
READ MORE