ಹುಡುಕಾಟ

Author : ಪುರುಷೋತ್ತಮ ಬಿಳಿಮಲೆ

Pages 328

₹ 350.00




Year of Publication: 2024
Published by: ಚಿರಂತ್ ಪ್ರಕಾಶನ
Address: ಬ್ರಹ್ಮಪುತ್ರ ಸಂಕೀರ್ಣ, ಕೋರಮಂಗಲ, ಬೆಂಗಳೂರು- 560034
Phone: 086609-66208

Synopsys

"ಹುಡುಕಾಟ” ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಪ್ರೊ. ಬಿಳಿಮಲೆ ಅವರ ಆಯ್ದ ಸಂಶೋಧನ ಲೇಖನಗಳ ಸಂಕಲನವಿದು. ಈ ಕೃತಿಯಲ್ಲಿ ತಾಳೆಗರಿ, ಶಾಸನ, ಜನಪದ ಕಥನ, ನೃತ್ಯ, ಆಚರಣೆ, ಸಾಹಿತ್ಯ ಕೃತಿ ಮೊದಲಾಗಿ ಬಹುಸ್ತರೀಯ ಆಕರಗಳನ್ನು ದುಡಿಸಿಕೊಳ್ಳಲಾಗಿದೆ. ಇವನ್ನು ರಾಜಕೀಯ ಸಾಮಾಜಿಕ ಭಾಷಿಕ ಸಾಹಿತ್ಯಕ ನೆಲೆಗಳಿಂದ, ಬಹುಶಿಸ್ತೀಯ ವಿಧಾನದಲ್ಲಿ ಚರ್ಚಿಸಲಾಗಿದೆ. ಇಲ್ಲಿ ಹೊಸ ನೋಟಗಳು, ಹೊಸ ತಾತ್ವಿಕ ಚೌಕಟ್ಟುಗಳು ಮೈತಳೆದಿವೆ. ಈ ಕೃತಿ ಹೊಸತಲೆಮಾರಿನ ಸಂಶೋಧಕರಿಗೆ ಪ್ರೇರಣೆ ಕೊಡಬಲ್ಲ ಮಾದರಿಗಳನ್ನು ಒಳಗೊಂಡಿದೆ. ಜತೆಗೆ ಭಿನ್ನಮತೀಯ ಪ್ರಶ್ನೆಗಳನ್ನು ಹುಟ್ಟಿಸುತ್ತ, ಇರುವ ಮಾದರಿಗಳನ್ನು ಮುರಿದು ಹೊಸ ಮಾದರಿಗಳನ್ನು ಕಟ್ಟುವ ಪ್ರಚೋದನೆಯನ್ನೂ ನೀಡಬಲ್ಲದಾಗಿದೆ. ಈ ಕಾರಣದಿಂದ ಸಂಶೋಧನ ವಿಧಾನದ ಕಲಿಕೆಯಲ್ಲಿ ಉಪಯುಕ್ತವಾಗುವ ಪಠ್ಯವೂ ಆಗಿದೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Related Books