ಇಮ್ಮಡಿ ಪುಲಿಕೇಶಿ

Author : ಲಕ್ಷ್ಮಣ ಕೌಂಟೆ

₹ 425.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

'ಇಮ್ಮಡಿ ಪುಲಿಕೇಶಿ’ ಡಾ. ಲಕ್ಷ್ಮಣ ಕೌಂಟೆ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಇದು ಉತ್ತರಾಪಥೇಶ್ವರ ಎಂಬ ಬಿರುದಾಂಕಿತ, ಕಾನ್ಯಕುಬ್ಬದ ಸಾಮ್ರಾಟ, ಅಪಾರ ಸೈನ್ಯವನ್ನು ಹೊಂದಿದ ಹರ್ಷವರ್ಧನನಂತಹ ಮಹಾಪ್ರತಾಪಿಯನ್ನು ರಣತಂತ್ರದ ಮೂಲಕವೇ ಬಾದಾಮಿ ಚಾಲುಕ್ಯ ಪುಲಿಕೇಶಿ ಸೋಲಿಸಿದ್ದಲ್ಲದೇ, ಸೌಜನ್ಯ ಮತ್ತು ಸ್ನೇಹ ವಿಶ್ವಾಸಗಳಿಂದ ಅವನ ಹೃದಯವನ್ನು ಗೆದ್ದು ಅವನಿಂದಲೇ ಪರಮೇಶ್ವರ ಪುಲಿಕೇಶಿ ಎಂದು ಹೊಗಳಿಸಿಕೊಂಡ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಇಮ್ಮಡಿ ಪುಲಿಕೇಶಿಯ ಸಮಗ್ರ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. 

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books