ಸಾಹಿತ್ಯ ಎಂಬ ಸೀಮಿತ ಚೌಕಟ್ಟಿನಲ್ಲಿ ಬಂಧಿಯಾಗದೆ ಸಮಾಜದ ಎಲ್ಲ ಆಗುಹೋಗುಗಳಿಗೆ ಸ್ಪಂದಿಸುತ್ತಿರುವ ಅಪರೂಪದ ಲೇಖಕ ನಾ. ಡಿಸೋಜ ಅವರ ಮಹತ್ವದ ಕಾದಂಬರಿ ಇದು.
ಆಧುನೀಕರಣದ ಕುರುಹುಗಳಾದ ಅಣೆಕಟ್ಟುಗಳ ಭರಾಟೆಯಲ್ಲಿ ಭೂಮಿ ಮುಳುಗಡೆಯಾಗುವ ಸಮಸ್ಯೆ ಮತ್ತು ಅದರ ವ್ಯತಿರಿಕ್ತ ಪರಿಣಾಮಗಳನ್ನು ಇಲ್ಲಿ ದಾಖಲಿಸಿದ್ದು, ಸ್ಥಳೀಯ ಜನರು ತಮ್ಮ ನೆಲೆ ಕಳೆದುಕೊಂಡು ಸ್ಥಳಾಂತರಗೊಳ್ಳಬೇಕಾದ ದಾರುಣ ಕಥೆಯನ್ನು ಗಾಢವಾಗಿ ಈ ಕಾದಂಬರಿಯಲ್ಲಿ ಅಭಿವ್ಯಕ್ತಿಪಡಿಸಿದ್ದಾರೆ.
ಈ ಕೃತಿ ಇಂಗ್ಲಿಷ್ ಭಾಷೆಗೆ ‘ಐಲ್ಯಾಂಡ್’ ಹೆಸರಿನಿಂದ ಭಾಷಾಂತರವಾಗಿದೆ. 2002ರಲ್ಲಿ ಖ್ಯಾತ ನಟಿ ಸೌಂದರ್ಯ ಅವರ ನಿರ್ಮಾಣ, ಗಿರೀಶ್ ಕಾಸರವಳ್ಳಿ ಅವರ ನಿದೇರ್ಶನದಲ್ಲಿ ಚಲನಚಿತ್ರವಾಗಿ ಜನರ ಅಂತಃಕರಣವನ್ನು ಮುಟ್ಟುವಲ್ಲಿ ಸಫಲವಾಗಿತ್ತು.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE