‘ಹಳ್ಳಿ’ ದಿವಾಕರ ಎಸ್ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ;ಇವಾನ್ ಅಲೆಕ್ಸಿಯವಿಜ್ ಬುನಿನ್ 1933ರಲ್ಲಿ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲ ರಷ್ಯನ್ ಲೇಖಕ. ಧ್ವನಿಶಕ್ತಿಯುಳ್ಳ ಭಾಷೆ, ಕಣ್ಣುತುಂಬಿಬರುವಂತೆ ಹತಾಶೆಯನ್ನು ನಿರೂಪಿಸುವ ಪ್ರತಿಭೆ, ಬದುಕಿನ ಬಗೆಗೆ ಅತೀವ ಪ್ರೀತಿ ಇವೆಲ್ಲವೂ ಇವನ ಕೃತಿಗಳಲ್ಲಿ ಎದ್ದು ಕಾಣುವ ಅಂಶಗಳು. ಸಂವೇದನೆ, ಅಂತಃಸ್ಪುರಣಿ, ಸಂಸ್ಕರಣೆ ಮೊದಲಾದವುಗಳಿಂದ ಚಾಲನೆ ಪಡೆದ ಬುನಿನ್ ಒಂದು ಅರ್ಥದಲ್ಲಿ ಕಪಟತನವಿಲ್ಲದ ಶುದ್ಧ ಲೇಖಕ. ಈ ಕಾದಂಬರಿಯಲ್ಲಿರುವುದು ಜೀವನದಲ್ಲಿ ಬೇರೆ ಬೇರೆ ದಾರಿಗಳನ್ನು ಹಿಡಿದ ಅಣ್ಣತಮ್ಮಂದಿರಿಬ್ಬರು ಕೊನೆಗೂ ಮಾನಸಿಕವಾಗಿ, ಅಷ್ಟೇಕೆ ಬೌದ್ಧಿಕವಾಗಿ ಕೂಡ, ಕ್ಷುದ್ರರಾಗಿಯೇ ಉಳಿದುಬಿಡುವ ಘೋರ ಚಿತ್ರ ಕಾದಂಬ- ರಿಯ ಶೀರ್ಷಿಕೆ ಮತ್ತು ಬಲಾಷಿನ್ ಎಂಬ ಪಾತ್ರ ಇಡೀ ರಷ್ಯವೇ ಒಂದು 'ಹಳ್ಳಿ' ಎನ್ನುವುದನ್ನು ಸಮರ್ಥಿಸುವಂತಿವೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE