ದರ್ಪಣ

Author : ವಾಣಿ ರಾವ್

Pages 200

₹ 150.00




Year of Publication: 2015
Published by: ರಾಘವೇಂದ್ರ ಎಂಟರ್ ಪ್ರೈಸಸ್
Address: ಗುಡುಗನಹಳ್ಳಿ, ಅಕ್ಕಿಹೆಬ್ಬಾಳ್(ಹೆಚ್),ಕೆ.ಆರ್.ಪೇಟೆ(ತಾ), ಮಂಡ್ಯ.

Synopsys

‘ದರ್ಪಣ’ ವಾಣಿ ರಾವ್ ಅವರ ಕಾದಂಬರಿಯಾಗಿದೆ. ವಾಣಿರಾವ್ ಅವರು ಸಂಗೀತ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಮುಂತಾಗಿ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಚಟುವಟಿಕೆಯಿಂದಿದ್ದಾರೆ. ಭಾರತೀಯ ವಾಯು ಪಡೆಯಲ್ಲಿದ್ದ ಇವರ ಪತಿಯೊಂದಿಗೆ ಹಲವು ರಾಜ್ಯಗಳು ಮತ್ತು ಗಡಿ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ. 1962, 1965 ಮತ್ತು 1971 ರಲ್ಲಿ ನಡೆದ ಭಾರತ - ಪಾಕ್ತಿಸ್ತಾನಗಳ ಮೂರು ಯುದ್ಧಗಳನ್ನು ಕಣ್ಣಾರೆ ನೋಡಿದ್ದಾರೆ. ಕಾಶ್ಮೀರ. ಹಿಮಾಲಯ, ನೇಪಾಳ ಮುಂತಾದೆಡೆಗಳಲ್ಲಿ ಸಂಚರಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ವಾಯುಪಡೆಯ ಮಹಿಳಾ ವಿಭಾಗದಲ್ಲಿ, ಕೆಲಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಈ ಎಲ್ಲ ಚಟುವಟಿಕೆಗಳ ನಡುವೆಯೂ ಇವರು ಕಥೆ, ಕವನ, ಕಾದಂಬರಿ, ಶಿಶು ಸಾಹಿತ್ಯ ಮುಂತಾಗಿ ಸಾಹಿತ್ಯಕ್ಕೆ ಚಟುವಟಿಕೆ ನಡೆಸಿದ್ದಾರೆ. ಇವರು ಬರೆದ ಅನೇಕ ಪ್ರಬಂಧ, ಲಘು ಬರಹ, ನಾಟಕ, ರೂಪಕಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರವಾಗಿವೆ. ಇವರ ಕೆಲವು ಕವನ ಸಂಕಲನ, ಕಥಾ ಸಂಕಲನಗಳು, ಸಾಮಾಜಿಕ ಮತ್ತು ಸಾಹಸ ಕಾದಂಬರಿಗಳು ಪ್ರಕಾಶಗೊಂಡಿವೆ. ಇವರ 'ಗಗನ ಕುಸುಮ' ಕಥಾ ಸಂಕಲನಕ್ಕೆ ಅಂತರ ರಾಷ್ಟ್ರೀಯ ಮಹಿಳಾ ಪ್ರಶಸ್ತಿಯೂ ಮತ್ತು ಸಾಹಸ ಕಾದಂಬರಿ 'ಚಂದ್ರಕಾಂತ ಶಿಲೆಯ ಚಂಡಮಾರುತ' -ಕ್ಕೆ ಮಲ್ಲಿಕಾ ಪ್ರಶಸ್ತಿಯೂ ಲಭಿಸಿದೆ. ಪ್ರಸ್ತುತ ಇವರು ಬರೆದ 'ದರ್ಪಣ' ಸರಳ ಶೈಲಿಯ ಸಾಮಾಜಿಕ ಕಾದಂಬರಿಯಾಗಿದೆ. ಓದುಗರ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಉಲ್ಲೇಖಿಸಿದ್ದಾರೆ.

About the Author

ವಾಣಿ ರಾವ್
(04 October 1931)

ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್‌ ಅವರು 1931 ಅಕ್ಟೋಬರ್‌ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್‌. ಹೋಮಿಯೋಪತಿಯಲ್ಲಿ ಪಿಎಚ್‌ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...

READ MORE

Related Books