ಅಪ್ಪನ ಪ್ರೇಯಸಿ ನರಸಿಂಹಮೂರ್ತಿ ವಿ.ಆರ್. (ಕಾರ್ಪೆಂಟರ್) ಅವರ ಕಾದಂಬರಿ. ಓಡಿಹೋದ ಅಪ್ಪನನ್ನು ಹುಡುಕುತ್ತಾ ಪ್ರವೇಶ ಪಡೆವ ಕಾದಂಬರಿ ಅಪ್ಪನ ಹುಡುಕಾಟದ ಜೊತೆ ಜೊತೆಗೆ ಸಮಾಜದ ಇತರ ವ್ಯವಸ್ಥೆಯ ದುರಂತದ ಮೇಲೆ ಬೆಳಕು ಚೆಲ್ಲುತ್ತದೆ. ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಅಪ್ಪನ ತೆಕ್ಕೆಯಲ್ಲಿ ನೋಡಿದ ನೆನಪಿನ ಮೂಲಕ ಪ್ರಾರಂಭವಾಗುವ ಕಥೆ ಮುಗಿಯೋದು ಮಗನ ಮೊದಲ ಪ್ರೀತಿಯ ಹುಡುಗಿಯ ಜೊತೆ ಓಡಿ ಹೋಗುವ ಮೂಲಕ.
ಕಾದಂಬರಿಯಲ್ಲಿನ ಅಪ್ಪನಿಗೆ ಎಲ್ಲವೂ ಗೊತ್ತು. ಗಡಿಯಾರ ರಿಪೇರಿ ಮಾಡಬಲ್ಲ ಅರ್ಧಮರ್ಧ ಗೊತ್ತಿದ್ದೂ ರೇಡಿಯೋ ರಿಪೇರಿಯನ್ನೂ ಮಾಡಬಲ್ಲ. ಕುಟುಂಬದಲ್ಲಿ ಇದ್ದೂ ಇಲ್ಲದಂತೆ ಇರುವ ಅಪ್ಪನ ಕುಟುಂಬ ನಡೆಯೋದು ದಿಟ್ಟೆ ಅವ್ವನ ಮಾರ್ಗದಲ್ಲಿ. ಇದು ಲೇಖಕರ ಆತ್ಮಕಥೆ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಕಥೆಯ ಬಿಗಿ ನಿರೂಪಣೆ ಈ ಕಥೆ ಲೇಖಕನದೇ ಅನಿಸುತ್ತದೆ. ಬಡತನ, ದಾರಿದ್ರ್ಯತೆ, ಮೂಢತ್ವ, ಜಾತಿಯತೆ ನಮ್ಮ ದೇಶದ ಮನೆಮನೆಗಳಲ್ಲಿ ತೀರಾ ಸಾಮಾನ್ಯನೆಂಬಂತೆ ವಾಸವಾಗಿದೆ. ಅದೆಲ್ಲದರಲ್ಲಿ ಬದುಕುವ ಮಧ್ಯಮ ವರ್ಗ ಯಾವುದಕ್ಕೆಲ್ಲಾ ಒದ್ದಾಡುತ್ತದೆ ಎಂಬುದನ್ನು ಇಡೀ ಕಾದಂಬರಿ ವಿವರಿಸುತ್ತದೆ. ತಮಿಳು, ಇಂಗ್ಲಿಷ್ ಗೆ ಸಹ ಅನುವಾದಗೊಂಡಿರುವ ‘ಅಪ್ಪನ ಪ್ರೇಯಸಿ’ ಕಾರ್ಪೆಂಟರ್ ಅವರ ಹೆಸರಾಂತ ಕಾದಂಬರಿ.
ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...
READ MORE