'ಗೋಳಿಮರ' ಗೋಪಾಲಕೃಷ್ಣ ನಾಯಕರ ಹದಿನಾಲ್ಕು ಕತೆಗಳ ಸಂಕಲನ. ನಿರೂಪಣೆ, ಶೈಲಿಯ ದೃಷ್ಟಿಯಿಂದ ವಿಭಿನ್ನವಾಗಿದೆ. ಕರಾವಳಿ ಸೀಮೆಯ ನಿಸರ್ಗದ ಚಿಕ್ಕ ಚಿಕ್ಕ ಗ್ರಾಮಗಳೆಂಬ ಕೊಪ್ಪಗಳಲ್ಲಿ ನೆಲೆಸಿರುವ ಜನರ ದೈನಂದಿನ ಜೀವನದ ತವಕ- ತಲ್ಲಣಗಳು, ಧಾವಂತಗಳು ಮನಮುಟ್ಟುವಂತೆ ಚಿತ್ರಿತವಾಗಿದೆ. ಓದುಗರನ್ನು ಕುತೂಹಲದಿಂದ ತನ್ನೊಳಗೆ ಸೆಳೆಯುವ ಈ ಕಥನಲೋಕ ಹೊಸ ಸುಂದರ ಜಗತ್ತನ್ನು ತೆರೆದಿಡುತ್ತದೆ. ಈ ಸಂಕಲನದ ಕತೆಗಳನ್ನು ಓದಿ ಮುಗಿಸಿದಾಗ ಒಂದು ರೀತಿಯಲ್ಲಿ ಸಾಮಾಜಿಕ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಸುತ್ತಮುತ್ತಲಿನ ಸಮಾಜವನ್ನು ತೆರೆದ ಕಣ್ಣಿನಿಂದ ನೋಡಿದಾಗ ಇಂತಹ ಕತೆಗಳು ಪ್ರತಿಯೊಂದು ಊರು-ಕೇರಿಗಳಲ್ಲಿ ಇರಬಹುದೆಂಬ ಅರಿವು ಓದುಗರಿಗೆ ಉಂಟಾಗದೇ ಇರದು.
ನಾಯಕರು ಹುಟ್ಟಿದ್ದು (೧೯೬೦) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಾಸರೆಯಲ್ಲಿ. ಅಂಕೋಲೆಯ ಶೈಕ್ಷಣಿಕ ಪರಿಸರದಲ್ಲಿ ‘ಕಾಂತಾ ಮಾಸ್ತರ’ ಎಂದೇ ಪರಿಚಿತರಾಗಿರುವ ನಾಯಕರು ಸ್ವಾತಂತ್ರö್ಯ ಹೋರಾಟಗಾರರ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ತಮ್ಮ ಹುಟ್ಟೂರಿನ ಕುರಿತು ‘ವಾಸರೆ ಕುದ್ರಿಗೆ’ ಎಂಬ ಭೌಗೋಳಿಕ ಅಧ್ಯಯನ ಗ್ರಂಥವನ್ನು ರಚಿಸಿದ್ದಾರೆ. ಕತೆ, ಕಾವ್ಯ ರಚನೆಯಲ್ಲಿ ಗ್ರಾಮ್ಯ ಭಾಷೆಯ ಸೊಗಡನ್ನು ಬಹು ಸ್ವಾರಸ್ಯಕರವಾಗಿ ಬಳಸಿಕೊಂಡು ಜನಪದ ಸಿರಿವಂತಿಕೆಯ ತಾಜಾತನವನ್ನು ಆಪ್ತವಾಗಿ ಕಟ್ಟಿಕೊಡುವ ಇವರ ಕೆಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ, ಅಂಕೋಲೆಯ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ, ಡಾ. ...
READ MORE