ರೆಕ್ಕೆಯಿಲ್ಲದ ಹಕ್ಕಿ

Author : ಅಗ್ರಹಾರ ಕೃಷ್ಣಮೂರ್ತಿ

₹ 80.00




Year of Publication: 2025
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

`ರೆಕ್ಕೆಯಿಲ್ಲದ ಹಕ್ಕಿ' ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದು, 2024ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಗುಜರಾತಿ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಅವರ ಆಯ್ದ ಕಥೆಗಳ ಮೂಲ ಸಂಕಲನ ಇದಾಗಿದೆ. ಕೃತಿಯ ಬಗ್ಗೆ ರಶ್ಮಿ ತೆಂಡೂಲ್ಕರ್ ಹೀಗೆ ಹೇಳುತ್ತಾರೆ; ಮದುವೆಯಾದ ಹೆಂಗಸಿಗೆ ಬರುವ ಒಂದು ಪ್ರೇಮ ಪತ್ರದ ಕತೆ. ಆಕೆಗೆ ಪತ್ರ ಬರೆದಿದ್ದು ಯಾರೋ ಅಪರಿಚಿತ. ಆ ಪ್ರೇಮ ಪತ್ರ ಆಕೆಗೆ ಖುಷಿ ಕೊಡುತ್ತದೆ. ಒಂದು ಸಂಗೀತ ಕಚೇರಿಗೆ ಬಾ ಎಂದು ಕರೆದಾಗ ಆ ಅಪರಿಚಿತನನ್ನು ನೋಡ್ಬೇಕು ಅಂತ ಅವಳು ಹೊರಡುತ್ತಾಳೆ. ಅಲ್ಲಿ ಅವನಿಗಾಗಿ ಹುಡುಕುತ್ತಾಳೆ. ಅವ ಯಾರು ಅಂತ ಕೊನೆಗೂ ಅವಳಿಗೆ ಗೊತ್ತಾಗಲ್ಲ. ಆದ್ರೆ ಈ ಪತ್ರ ಬರೆದ ವ್ಯಕ್ತಿ ಆಕೆಯನ್ನು ನೋಡ್ತಾನೆ. 'ವಾವ್, ಹೆಂಗಸರೆಂದರೆ ಹೀಗೆ! ನೆಲೆಯೂರಿ ನಿಂತ ಸ್ತ್ರೀಯೊಬ್ಬಳು ಪ್ರೀತಿಯ ಇಂಥ ಗಾಳಿ ಮಾತನ್ನು ಇಷ್ಟು ಸುಲಭವಾಗಿ ನಂಬುತ್ತಾಳೆ. ಯಾರಿಗೆ ಬೇಕಾದರೂ ಪ್ರೇಮ ಪತ್ರಗಳನ್ನು ಬರೆಯುತ್ತಾ ಎಲ್ಲ ಕಡೆ ತಿರುಗಾಡುವುದು ಎಷ್ಟು ಸುಲಭವಾದ ಕೆಲಸ.. ಎಂಥಾ ಅದ್ಭುತ!' ಅಂತಾನೆ ಕತೆ ಅಲ್ಲಿಗೆ ಮುಗಿಯುತ್ತೆ. ಓದಿದ ನಂತರ ಈ ಕತೆಯ ಹೆಣ್ಣು ಕಾಡುತ್ತಾಳೆ.

About the Author

ಅಗ್ರಹಾರ ಕೃಷ್ಣಮೂರ್ತಿ
(18 January 1953)

ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ  ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ  ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ...

READ MORE

Related Books