ಸದಾಶಿವ ಬ್ರಹ್ಮೇಂದ್ರ

Author : ನಾ. ಡಿಸೋಜ

Pages 102

₹ 15.00




Year of Publication: 1979
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19

Synopsys

`ಸದಾಶಿವ ಬ್ರಹ್ಮೇಂದ್ರ' ಈ ತತ್ವಜ್ಞಾನಿಯ ಜೀವನಚರಿತ್ರೆಯನ್ನು ಕಟ್ಟಿಕೊಡುವ ಕೃತಿ ಇದು. ಲೇಖಕ ನಾ. ಡಿಸೋಜ ಅವರು ರಚಿಸಿದ್ದಾರೆ. ಪ್ರಸಿದ್ಧ ವಾಗ್ಗೇಯಕಾರರು. ಯೋಗಿಗಳಾಗಿ, ಎಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ಬದುಕಿದ ಮಹಾಜ್ಞಾನಿಗಳು. ಭಜರೇ ಗೋಪಾಲಂ ಮಾನಸ ಸಂಚರರೆ ಗಾಯಕಿ ವನಮಾಲಿ ಮೊದಲಾದ  ರಚನೆಗಳು ಇಂದಿಗೂ ಜನಪ್ರಿಯವಾಗಿವೆ. ಸಮಾಜಕ್ಕೆ ಬೇಕಾದ ಉತ್ತಮ ಸಂದೇಶಗಳನ್ನು ಸದಾಶಿವ ಬ್ರಹ್ಮೇಂದ್ರ ಅವರು ಕೊಟ್ಟ ಬಗೆ, ಅವರ ರಚನೆಗಳು, ಬಾಲ್ಯ ಜೀವನ, ಸರ್ವಸ್ವವನ್ನೂ ದೇವರಿಗೆ ಅರ್ಪಿಸಿದ ಬಗೆ ಹೀಗೆ ಅವರ ಬದುಕಿನ ಹಲವಾರು ಆಯಾಮಗಳನ್ನು ಈ ಕೃತಿಯು ಪರಿಚಯಿಸುತ್ತದೆ. 

About the Author

ನಾ. ಡಿಸೋಜ
(06 June 1937 - 05 January 2025)

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು.  ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...

READ MORE

Related Books