ಕೃಷ್ಣದೇವರಾಯ

Author : ಜಯತೀರ್ಥ ರಾಜಪುರೋಹಿತ

Pages 120

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಕೃಷ್ಣದೇವರಾಯ' ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಜಯತೀರ್ಥ ರಾಜಪುರೋಹಿತರು. ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ, ಹಿರಿಮೆಗಳ ಸಂಕೇತ. ಬಲಿಷ್ಠವಾದ ಶತ್ರು ಸೈನ್ಯಗಳನ್ನು ಸೋಲಿಸಿದ . ಪರಾಕ್ರಮದೊಂದಿಗೆ ಕ್ಷಮೆಯನ್ನೂ, ಆಡಳಿತದ ಬಿಗಿಯೊಂದಿಗೆ ಪ್ರಜಾ ವಾತ್ಸಲ್ಯವನ್ನೂ ಮೆರೆದ ಚಕ್ರವರ್ತಿ. ಇವನ ಕಾಲದಲ್ಲಿ ಹಂಪೆಯ ಬೀದಿಗಳಲ್ಲಿ ಮುತ್ತುರತ್ನಗಳನ್ನು, ಅಕ್ಕಿ ಜೋಳಗಳಂತೆ ಮಾರುತ್ತಿದ್ದರು. ಧರ್ಮ ಲಲಿತ ಕಲೆಗಳಿಗೆ ಉದಾರವಾದ ಆಶ್ರಯ ನೀಡಿದ ರಸಿಕ. ಮಹಾಕವಿಯ ಪಲ್ಲಕ್ಕಿಗೆ ತಾನೇ ಹೆಗಲು ಕೊಟ್ಟ ಸಾಹಿತ್ಯಪ್ರೇಮಿ ಎಂದು ಕೃಷ್ಣದೇವರಾಯನ ಕುರಿತು ಲೇಖಕರು ಈ ಪುಸ್ತಕದಲ್ಲಿ ಸರಳ ಕನ್ನಡದಲ್ಲಿ ರಚಿಸಿದ್ದಾರೆ.

About the Author

ಜಯತೀರ್ಥ ರಾಜಪುರೋಹಿತ
(01 July 1925)

ಸಾಹಿತಿ ಜಯತೀರ್ಥ ರಾಜಪುರೋಹಿತ ಅವರು ಮೂಲತಃ ಗಂಗಾವತಿ ತಾಲ್ಲೂಕಿನ ಕನಕಗಿರಿಯವರು. 1925 ಜುಲೈ 01ರಂದು ಜನಿಸಿದರು. ತಂದೆ ಶೇಷಾಚಾರ‍್ಯ, ತಾಯಿ ರಂಗಮ್ಮ. ತಂದೆಯಿಂದ ಸಂಸ್ಕೃತ ಶಿಕ್ಷಣ ಪಡೆದ ಇವರು ಹರಿದಾಸರ ಹಾಡುಗಳನ್ನು ಚಿಕ್ಕವರಿದ್ದಾಗಲೇ ಹಾಡುತ್ತಿದ್ದರು. ಬಿ. ಎ. ಪದವಿಯನ್ನು ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಡೆಪ್ಯುಟಿ ಕಮೀಷನರ್, ಮುನಿಸಿಪಲ್ ಕಮೀಷನರ್, ವಿ.ವಿ.ದ ಪರೀಕ್ಷಾ ನಿಯಂತ್ರಣಾಧಿಕಾರಿ, ನೀರಾವರಿ ಯೋಜನೆಗಳ ಆಡಳಿತಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ಧಿ ನಿರ್ದೇಶನದ ಪ್ರಥಮ ನಿರ್ದೇಶಕರಾಗಿದ್ದರು.  ಹಾಲುಜೇನು, ಸುಳಿಗಾಳಿ, ಕಡಲತೋಳ (ಅನುವಾದ) ಅವರ ಕಾದಂಬರಿಗಳು. ಪಾರವ್ವನ ಪಂಚಾಯಿತಿ, ರೋಹಿಣಿ, ಮೌಲ್ಯಗಳು, ಶಿಥಿಲ ಶಿಲೆ ...

READ MORE

Related Books