`ಕದಂಬ ಮಯೂರಶರ್ಮ' ಜೀವನ ಚರಿತ್ರೆಯ ಈ ಕೃತಿಯನ್ನು ಲೇಖಕ ನಾ. ಡಿಸೋಜ ಅವರು ರಚಿಸಿದ್ದಾರೆ. ವೇದ, ಉಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿದ್ದ ಯುವಕ, ಗರ್ವಿಷ್ಠರಾದ ಪಲ್ಲವ ರಾಜರ ಸೈನಿಕರ ಅನ್ಯಾಯಕ್ಕೆ ಸಿಡಿದೆದ್ದ. ಸೈನ್ಯ ಕಟ್ಟಿದ, ಪ್ರಜೆಗಳ ಹಿತವನ್ನು ಕಡೆಗಣಿಸಿದ್ದ ರಾಜನ ಮದವನ್ನಿಳಿಸಿದ, ಅವನಿಂದಲೇ ರಾಜ್ಯ ಪಡೆದು ಕದಂಬ ರಾಜವಂಶದ ಮೂಲಪುರುಷನಾದ, ಪ್ರಜೆಗಳ ಸುಖಕ್ಕಾಗಿ ರಾಜನಾದ ಮಯೂರಶರ್ಮ ಅವರ ಜೀವನದ ಘಟ್ಟಗಳನ್ನು ಲೇಖಕರು ಇಲ್ಲಿ ಸರಳ ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ. ಮಯೂರಶರ್ಮಾರ ಬಾಲ್ಯದ ದಿನಗಳು, ಅನ್ಯಾಯಕ್ಕೆ ಸಿಡಿದ ರೀತಿ, ಪ್ರಜೆಗಳ ಜೊತೆ ಹೊಂದಿದ ಸಂಬಂಧಗಳು ಹೀಗೆ ಹಲವಾರು ತಿರುವುಗಳೊಂದಿಗೆ ಇಲ್ಲಿನ ಕಥೆಯು ಸಾಗುತ್ತದೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE