ಪಿ.ಶಿವಕಾಮಿಯವರು ತಮಿಳು ನಾಡಿನ ಪ್ರಮುಖ ದಲಿತ ಲೇಖಕಿ. ದಲಿತರ ಆಡು ಮಾತನಲ್ಲಿಯೇ ಸಂಕ್ರಾಂತಿಯನ್ನು ಬರೆದಿದ್ದಾರೆ. ಅದೇ ಮಾತಿನಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಇದನ್ನು ತಮಿಳ್ ಸೆಲ್ವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಟ್ಟಾರೆಯಾಗಿ ನಡೆಯುವ ಜಾತಿ ಹೋರಾಟ, ಮೇಲುಕೀಳಿನ ಭಾವ, ದಲಿತರಲ್ಲಿಯೇ ಇರುವ ಒಳಪಂಗಡಗಳ ನಡುವಿನ ತಿಕ್ಕಾಟ, ಹೆಣ್ಣು ಗಂಡಿನ ಸಂಬಂಧಗಳು, ಪುರುಷ ಪ್ರಧಾನ ಸಮಾಜದ ವಿವಿಧ ಮುಖಗಳು ಹಾಗೂ ಅಂತಹ ಪುರುಷ ನಾಯಕನ ಮಗಳು ತಂದೆಯ ವಿರುದ್ಧವೇ ಸಿಡಿದೇಳುವುದು, ರಾಜಕೀಯ ಲೆಕ್ಕಾಚಾರಗಳು, ನಟನೊಬ್ಬನ ಮೂಲಕ ಸಾಂಕೇತಿಕವಾಗಿ ಚಲನಚಿತ್ರವು ರಾಜಕೀಯ ಪ್ರವೇಶಮಾಡುವುದು, ಬಡತನ, ಪೊಲೀಸ್ ಆಡಳಿತ ಇವೆಲ್ಲಾ ಕಥೆಯ ಹರಿವಿನಲ್ಲಿ ಬರುವ ಪ್ರಮುಖ ಅಂಶಗಳಾಗಿವೆ.
ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8 ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ...
READ MORE