ನವಚೈತ್ರ ಇದೊಂದು ಅದ್ಭುತ ಪ್ರೇಮಕಥೆಯನ್ನು ಒಡಲಲ್ಲಿಟ್ಟುಕೊಂಡಿರುವ ಕಾದಂಬರಿ. ಅಷ್ಟರಲ್ಲಿ ಗುರುಮೂರ್ತಿಯ ಸ್ವರ, “ರಜನಿ ನೀನು ಇಲ್ದೆ ಬದುಕೋಲ್ಲ ಅಂತಾಳೆ.” ಸಮಾಧಾನವಾಗಿ ಹೇಳಿದ “ಟೂ ಲೇಟ್...” ರಿಸೀವರ್ ಇಟ್ಟ. ಮತ್ತೆ ರಿಂಗಾಯಿತು. ರಜನಿಯ ಮಾತು, ಬಿಕ್ಕುವಿಕೆ. ಅವನು ಕಲ್ಲಾಗಿದ್ದ. “ರಾಂಗ್ ನಂಬರ್...” ಫೋನಿಟ್ಟ. “ತನ್ನನ್ನ ಒಂದು ಹೆಣ್ಣು ಆಸಕ್ತಿಯಿಂದ ಗಮನಿಸೋದು ಮುಖ್ಯ. ಅದು ಎಷ್ಟರ ಮಟ್ಟಿಗೆ ಅವನ ಬಾಳಿಗೆ ಸ್ಫೂರ್ತಿಯಾಗುತ್ತೆ ಅನ್ನೋದು ಮುಖ್ಯ. ಅದು ನಿನ್ನ ಮೂಲಕವೆ ಗೊತ್ತಾಗಿದ್ದು” ವಿಕಾಸ್ ಉಸುರಿದ. ಕೋಮಲ ತಬ್ಬಿಬ್ಬಾದಳು. ಅದು ‘ನವಚೈತ್ರ’ದ ಉದಯಕ್ಕೆ ಕಾರಣ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE