ಇಬ್ಬನಿ ಕರಗಿತು' ಎನ್ನುವ ಪುಟ್ಟ ಕಾದಂಬರಿ ಓದುಗರಿಗೆ ರೋಚಕತೆಯನ್ನು ಹುಟ್ಟುಹಾಕುತ್ತಾ ಕಾದಂಬರಿಯೂ ಮುಂದೆ ಸಾಗುತ್ತದೆ.ಕೆಲವರು ಯಾರು ತಮಗೆ ಹೆಚ್ಚು ಹತ್ತಿರವಾಗುತ್ತಾರೋ ಅವರನ್ನು ಪ್ರೀತಿಯಿಂದ 'ಇಬ್ಬನಿ' ಎಂದು ಕರೆದು ಕೊಂಡಿದ್ದೇವೆಂದು ಪ್ರತಿಕ್ರಿಯೆ ನೀಡಿದ್ದಾರೆ.ಸೂಕ್ಷ್ಮ ಸಂವೇದನೆಯ ಕಥಾ ವಸ್ತು. ಎಲ್ಲಿಂದೆಲ್ಲೋ ಎಳೆದು ತಂದ ಪಾತ್ರಗಳಲ್ಲ. ಕಾದಂಬರಿಯಲ್ಲಿ ಮೂಡಿ ಬರುವ ವರುಣ್ ಮತ್ತು ಮಾನಸ ಎಂಬ ಪಾತ್ರಗಳು ಚಲನಚಿತ್ರದಲ್ಲಿ ಪಾತ್ರಗಳಾಗಿ ಸಿನಿಪ್ರಿಯರನ್ನು ರಂಜಿಸಿದನ್ನು ಕಾಣಬಹುದು.ಮುಸುಕಿದ್ದ ಇಬ್ಬನಿ ಕರಗಿ ಹೋಗಲು ಹಲವಾರು ಘಟನೆಗಳು ಘಟಿಸಬೇಕಿತ್ತು. ಅದು ಸಹಜ, ಸ್ವಾಭಾವಿಕ. ಇಣಕಿದ 'ಇಬ್ಬನಿ' ಕರಗಲು ಸೂರ್ಯನ ಹೊಂಗಿರಣಗಳ ರಶ್ಮಿ ಅಗತ್ಯ.ಹೀಗೆ ಈ ಕಾದಂಬರಿಯೂ ಓದುಗರಿಗೆ ರೋಚಕತೆಯನ್ನು ಹುಟ್ಟುಹಾಕುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE