ಇಂಗ್ಲೆಂಡ್ ನ ಚಾಲ್ಸ್ ಡಿಕೆನ್ಸ್ ಮಹಾಕವಿಯ ಮೂಲ ಕಾದಂಬರಿಯ ಸಂಗ್ರಹ ಅನುವಾದವೇ ಆಲಿವರ್ ಟ್ವಿಸ್ಟ್. ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಈ ಕೃತಿಯನ್ನು ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನುವಾದಿಸಿ ಸಂಗ್ರಹಿಸಿದ್ದಾರೆ. ಅವರೇ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ‘ವಿಶ್ವಾದ್ಯಾಂತ ಜನಪ್ರಿಯಗೊಂಡ ಆಲಿವರ್ ಟ್ವಿಸ್ಟ್ ’ ಕಾದಂಬರಿಯನ್ನು ನಮ್ಮ ಕನ್ನಡದ ಮಕ್ಕಳಿಗೆ ತಂದು ಕೊಡುವ ಪ್ರಯತ್ನ ಮಾಡಿದ್ದೇನೆ. ಡಿಕೆನ್ಸ್ ಕಾವ್ಯದ ಅನೇಕ ಅಂಶ ಕೈ ಬಿಟ್ಟು ಹೋಗಿದೆ ಎಂಬುದು ನಿಜ. ಆದರೂ, ಕಥೆ ಕೆಡದ ಹಾಗೆ, ಮುಖ್ಯ ಪಾತ್ರಗಳ ಕಥೆ ಆದಷ್ಟು ಉಳಿಯುವ ಹಾಗೆ, ಇಂಗ್ಲಿಷ್ ಜನಜೀವನದ ವಾಸನೆ ಅದಕ್ಕೆ ಅಪರಿಚಿತರಾದ ನಮ್ಮ ಮಕ್ಕಳಿಗೆ ಅನಾವಶ್ಯಕವಾಗಿ ಹೊರೆಯಾಗದ ಹಾಗೆ, ಡಿಕೆನ್ಸಿಗೆ ಬಡವರ ಬಗ್ಗೆ ಇದ್ದ ಅಪಾರವಾದ ಕರುಣೆಯ ಛಾಯೆ ಕೊರೆಯಾಗದ ಹಾಗೆ ಈ ಕಾದಂಬರಿಯನ್ನು ಸಂಗ್ರಹಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE