ಲಕೋಟೆಯನ್ನ ಸಂಜೆಯ ಬಿಡುವಿನಲ್ಲಿ ಬಿಡಿಸಿದಾಗ ಒಟ್ಟು ಆರುಪುಟಗಳು ಸಾಹಿತ್ಯಮಯ ಭಾಷೆಯಿಂದ ತುಂಬಿತ್ತು. ಗಾಢವಾಗಿ ಓದಿ ಮುಗಿಸಿದಾಗ ಕಣ್ಣಂಚಿನಲ್ಲಿ ಕಂಬನಿ ಶೇಖರವಾಗಿತ್ತು. ಹತ್ತಾರು ದಿನಗಳು ಕಳೆದರೂ ಆ ಪುಟಗಳ ಮುದ್ದಾದ ಅಕ್ಷರಗಳ ಹಿಂದಿನ ವೇದನಾಮಯ ಛಲದ ಮುಖ ನನ್ನ ಕಣ್ಮುಂದೆ ಸುಳಿಯುತ್ತಿತ್ತು. ಸಭ್ಯ ವಿದ್ಯಾವಂತ ಸುಸಂಸ್ಕೃತ ಜನ ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು? ತಲೆಯಲ್ಲಿ ತುಂಬಿಕೊಂಡ ವಿಚಾರ ಬಿಡುಗಡೆ ಬಯಸಿದಾಗ ನಿಮ್ಮ ಮುಂದೆ ಕಾದಂಬರಿಯ ರೂಪದಲ್ಲಿ ಇಟ್ಟಿದ್ದೇನೆ. ಅನ್ನೋದು ಈ ಕಾದಂಬರಿಯ ಬಗ್ಗೆ, ಕಾದಂಬರಿಕಾರ್ತಿಯ ಮಾತುಗಳು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE