ಮರಾಠರು ಹಾಗೂ ಬ್ರಿಟಿಷ್ ಆಡಳಿತಗಾರರ ಮಧ್ಯೆ ಇದ್ದ ಸಂಬಂಧ ಹಾಗೂ ತದನಂತರ ಅದು ಹೇಗೆ ಕಳಚಿಕೊಂಡಿತು ಎಂಬ ವಿವರಗಳೊಂದಿಗೆ ಬರೆದ ಐತಿಹಾಸಿಕ ಕಾದಂಬರಿ ಇದು-ಮರಾಠರೂ ಇಂಗ್ಲಿಷರೂ. ಮರಾಠ ಸಾಹಿತಿ ನ.ಚಿ. ಕೇಳಕರ್ ಅವರ ಮರಾಠಿ ಕಾದಂಬರಿ. ಇದನ್ನು ಲೇಖಕ ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ಕಥಾ ವಸ್ತುವನ್ನು ಇಟ್ಟುಕೊಂಡು ಲೇಖಕ ಭಿ.ಪ. ಕಾಳೆ ಅವರು 1 ಹಾಗೂ 2 ಭಾಗಗಳನ್ನು ಬರೆದಿದ್ದು, ಪ್ರಸ್ತುತ ಕೃತಿಯು ಮೂರನೇ ಭಾಗವನ್ನು ಪೂರ್ಣಗೊಳಿಸಿದೆ.
ಶೌರ್ಯ-ಧೈರ್ಯ-ಉದಾತ್ತ ಜೀವನ, ರಾಷ್ಟ್ರೀಯತೆ, ಸಾಹಸ-ಶಿಸ್ತು ಇಂತಹ ಯಾವುದೇ ಮೌಲ್ಯದಲ್ಲಿ ಮರಾಠರೂ ಹಿಂದೆ ಬಿದ್ದಿರಲಿಲ್ಲ. ಪೇಶ್ವ ಮಾಧವರಾಯರ ಕಾಲದವರೆಗೂ ಇದೇ ಮನಸ್ಥಿತಿಯವರಾಗಿದ್ದರು. ಆದರೆ, ತದನಂತರದ (1800 ಆರಂಭ) ಕಾಲದಲ್ಲಿ ಮರಾಠರಲ್ಲೇ ಕೆಲ ಸ್ವಾರ್ಥಿಗಳು ತಮ್ಮ ಬೇಳೆಯ ಬೇಯಿಸಿಕೊಳ್ಳಲು ಮರಾಠರ ವಿರುದ್ಧವೇ ನಡೆಸಿದ ಕಾರಸ್ಥಾನದಿಂದ ಮರಾಠರಲ್ಲಿಯ ಐಕ್ಯತೆ ಕಡಿಮೆಯಾಗುತ್ತಾ ಬಂದಿತು. ಮರಾಠಶಾಹಿ ಅವನತಿ ಕಂಡಿತು. ಇಂತಹ ಸಂಗತಿಗಳನ್ನು ಒಳಗೊಂಡ ಕಾದಂಬರಿ ಇದು.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE