ತೆಲುಗು ಕಾದಂಬರಿಕಾರ ಕೊಡವಟಿಗಂಟಿ ಕುಟುಂಬರಾವ್ ಅವರು ಬರೆದ ‘ಚೆದುವು’ ಕಾದಂಬರಿಯ ಕನ್ನಡ ಅನುವಾದ ಕೃತಿ ʻಓದುʼ. ಬಿ. ಸುಜ್ಞಾನಮೂರ್ತಿ ಅವರು ಅನುವಾದಿಸಿದ್ದಾರೆ. 1915-35ರ ವರೆಗಿನ ಕಾಲಘಟ್ಟದ ಆಂಧ್ರದ ರಾಜಕೀಯ-ಸಾಮಾಜಿಕ ಚಾರಿತ್ರಿಕ ವಾಸ್ತವ, ಮಧ್ಯಮವರ್ಗದ ಕುಟುಂಬಗಳು ಬದುಕುವ ವಾತಾವರಣ ಮತ್ತು ಸಂಸ್ಕೃತಿ, ಶಿಕ್ಷಣವಲಯದ ಆಗುಹೋಗುಗಳು ಇವು ಇಲ್ಲಿನ ಕಥೆಯ ಮುಖ್ಯವಸ್ತುಗಳಾಗಿವೆ. ಚಾರಿತ್ರಿಕ ದ್ವಂದ್ವಗಳ ಕಾರಣದಿಂದ, ವಿವಿಧ ಪಾತ್ರಗಳ ನಡುವೆ ಸಹಜವಾಗಿ ಮೂಡುವ ದ್ವಂದ್ವಗಳ ಕಾರಣದಿಂದ ಜ್ಞಾನ ಹೇಗೆ ವೃದ್ಧಿಸುತ್ತದೆ ಅನ್ನುವ ವಿಚಾರವನ್ನು ಕಾದಂಬರಿ ಪರಿಶೀಲಿಸುತ್ತದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...
READ MORE