ಇಂಗ್ಲೆಂಡಿನ ಲೇಖಕನಾದ ವಿಲಿಯಂ ಡಾಲ್ರಿಂಪನ್ ನ ’ನೈನ್ ಲೈವ್ಸ್’ ಕೃತಿಯನ್ನು ಕನ್ನಡಕ್ಕೆ ’ನವ ಜೀವಗಳು’ ಎಂಬ ಶೀರ್ಷಿಕೆಯಡಿ ಅನುವಾದ ಮಾಡಿದವರು ನವೀನ ಗಂಗೋತ್ರಿ.
ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ ಎಂಬ ಉಪಶೀರ್ಷಿಕೆಯಿರುವ ಈ ಕೃತಿಯು ಇಂದಿನ ’ಸ್ಪಿರಿಚ್ಯುಯಲ್ ಇಂಡಿಯಾದ ಅಪರೂಪದ ಚಿತ್ರಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸಂಸ್ಕೃತಿಯ ಅರಿವು, ಆಯಾಯ ಧರ್ಮಶ್ರದ್ಧೆಯ ಕುರಿತಾದ ಪರಿಚಯಾತ್ಮಕ ವಿವರಣೆಗಳು ಮತ್ತು ಶ್ರದ್ಧೆಯ ಹಾದಿಯಲ್ಲಿ ಸಾಗುತ್ತಿರುವ ಜೀವಗಳ ಜೊತೆಗಿನ ,ಮಾತುಕತೆಯೇ ಆಧ್ಯಾತ್ಮಿಕ ಅನುಭೂತಿಗೂ ಮೀರಿದ ಜೀವನಪ್ರೀತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.
ಈ ಕೃತಿಯಲ್ಲಿ ಒಂಭತ್ತು ಜೀವಗಳ ಕತೆಗಳನ್ನು ಲೇಖಕರು ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಲೇಖಕರು ಇತಿಹಾಸಕಾರರಾಗಿಯೂ, ರಾಜಕೀಯ ವಿಶ್ಲೇಷಣಾಕಾರರಾಗಿಯೂ ವಿವರವಾಗಿ ಈ ಕೃತಿಯ ಮೂಲಕ ಓದುಗರಿಗೆ ಪರಿಚಯಿಸಿದ್ದಾರೆ.
ನವೀನ ಗಂಗೋತ್ರಿ ಅವರು ಉತ್ತರಕನ್ನಡ ಜಿಲ್ಲೆಯ ಶೇವಕಾರದವರು . ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಾಣಿನೀಯ ವ್ಯಾಕರಣದಲ್ಲಿ ಉನ್ನತ ಶಿಕ್ಷಣ ಮತ್ತು ಡಾಕ್ಟರೇಟ್ ಗಳಿಸಿದ್ದಾರೆ. ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದ ಅಮೃತದರ್ಶನ ಅಂತಾರಾಷ್ಟ್ರಿಯ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕಾರಾಗಿ ಕಾರ್ಯನಿರ್ವಹಿಸುತಿದ್ದಾರೆ. ಸಂಶೋಧನೆ ಹಾಗೂ ಸಂಶೋಧನ ಮಾರ್ಗದರ್ಶನದ ಹೊರತಾಗಿ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸಾಹಿತ್ಯನಿರ್ಮಾಣ ಮತ್ತು ಅನುವಾದದಲ್ಲಿ ಪ್ರವೃತ್ತಿ ಪಡೆದಿದ್ದಾರೆ. ನಾಡಿನ ಪ್ರಮುಖ ದಿನಪತ್ರಿಕೆ ಮತ್ತು ಇತರ ನಿಯತಕಾಲಿಕೆಗಳಲ್ಲಿ ಕಥೆಗಳು, ಲೇಖನಗಳು ಮತ್ತು ಚಿಂತನಗಳು ಪ್ರಕಟವಾಗಿವೆ. ಇದುವರೆಗೆ ಒಂದು ಕವಿತಾಸಂಕಲನ (ಅಂಟಿಕೊಳ್ಳದ ಚಿತ್ರಗಳು), ಒಂದು ಕಥಾ ಸಂಕಲನ (ಸಂಕ) ಮತ್ತು ಮೂರು ಅನುವಾದ ಗ್ರಂಥಗಳು ಪ್ರಕಾಶ ಕಂಡಿವೆ. ...
READ MORE