ವಿಲಿಯಮ್ ಶೇಕ್ಸ್ಪಿಯರನಷ್ಟೆ ಪ್ರಸಿದ್ಧಿ ಪಡೆದ ಸರ್ವಾಂಟಿಸನ ಡಾನ್ ಕ್ವಿಕ್ಸಾಟ್ ಕಾದಂಬರಿಯ ಕಥಾನಾಯಕ ಮಧ್ಯ ವಯಸ್ಸು ದಾಟಿದ ಒಬ್ಬ ಸ್ಪ್ಯಾನಿಶ್ ಮಹಾಶಯ. ಇವನು ಮಧ್ಯಕಾಲೀನ ವೀರ ಸರದಾರರಸ ಕತೆಗಳನ್ನು ಓದಿ ಅದರಲ್ಲಿ ಬರುವ ರಕ್ಕಸರು, ಮಾಂತ್ರಿಕರು ಮುಂತಾದವರನ್ನು ನಿಜದಲ್ಲಿ ಕಾಣುವ ಭ್ರಮೆ ಹೊಂದಿದವನು. ಕಥಾನಾಯಕ ಸಾಂಕೋ ಪಾಂಚಾ ಎಂಬ ಹಳ್ಳಿಗನೊಬ್ಬನನ್ನು ತನ್ನ ಬಂಟನನ್ನಾಗಿ ಮಾಡಿಕೊಳ್ಳುತ್ತಾನೆ. ಕ್ವಿಕ್ಸಾಟನಿಗೆ ಸರದಾರತ್ವದ ಭ್ರಮೆಯಾದರೆ ಸಾಂಕೋಗೆ ಇದರಿಂದ ತನಗೇನಾದರು ದೊಡ್ಡ ಲಾಭ ಸಿಗುತ್ತದೆ ನಂಬಿಕೆಯಿಂದ ಬದುಕುತ್ತಿರುತ್ತಾನೆ. ಇಬ್ಬರೂ ಸಾಹಸಗಳನ್ನು ಹುಡುಕುತ್ತಾ ಹೊರಟು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ವಾಸ್ತವತೆ ಮತ್ತು ಭ್ರಮಾಧೀನತೆ, ಭೂತ ಮತ್ತು ವರ್ತಮಾನಗಳ ಮುಖಾಮುಖಿಗಳನ್ನು ಈ ಕಾದಂಬರಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...
READ MORE