ಮರಾಠಿಯ ಪ್ರಮುಖ ಗದ್ಯಲೇಖಕ, ಲೋಕಶಾಹಿರ್ ಎಂದೇ ಪ್ರಖ್ಯಾತರಾಗಿದ್ದ ಅಣ್ಣಾಭಾವು ಸಾಠೆ ಅವರ ಮುಖ್ಯ ಕಾದಂಬರಿಗಳಲ್ಲಿ ಇದೂ ಒಂದು. ಈ ಕಾದಂಬರಿಯಲ್ಲಿ ಅಣ್ಣಾಭಾವು ಸಾಠೆಯವರು ತಮ್ಮ ಊರು ವಾಟೆಗಾಂವದಲ್ಲಿನ ಸಾಂಪ್ರದಾಯಿಕ ಜಾತ್ರೆಯ ಸುತ್ತ ಜರುಗುವ ಪ್ರಸಂಗವನ್ನು ಕಾದಂಬರಿಯಾಗಿಸಿದ್ದಾರೆ. ಅಲ್ಲದೇ ಈ ಇಡೀ ಕಥೆಯಲ್ಲಿ ದಲಿತ, ದಮನಿತರೇ ಮುಖ್ಯ ಪಾತ್ರಗಳಾಗಿ ವಿಜೃಂಭಿಸುವಂತೆ ಮಾಡಿದ್ದಾರೆ. ಸ್ವಾತಂತ್ರೋತ್ತರ ಭಾರತದಲ್ಲಿನ ಭ್ರಷ್ಟ ಹಾಗೂ ದಮನಕಾರಿ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಲೋಕಾನುಭಗಳನನು ಹಿಡಿದು ಕಥೆಕಟ್ಟುವ ಕಲೆಯಲ್ಲಿ ಪಾರಂಗತರಾಗಿದ್ದ ಸಾಠೆಯವರ ಲೇಖನಿಯು ನೀಡಿದ ಮಹತ್ವದ ಪಾತ್ರಗಳಲ್ಲಿ ಫಕೀರಾ ಕೂಡ ಒಬ್ಬ. ಫಕೀರಾ ಬಿಸಿರಕ್ತದ ಯುವಕನಾಗಿ ಇಡೀ ಕಥೆಯಲ್ಲಿ ಧೈರ್ಯ, ಸಾಹಸ, ಸದ್ವಿವೇಕ ಬುದ್ಧಿ ಹಾಗೂ ತ್ಯಾಗವನ್ನು ಪ್ರದರ್ಶಿಸುತ್ತಾನೆ. ಮನೆಗೊಬ್ಬ ಫಕೀರಾ ಹುಟ್ಟಬೇಕು ಎನ್ನುವಷ್ಟು ಜನಪ್ರಿಯನಾಗುತ್ತಾನೆ. ಮರಾಠಿಯ ಫಕೀರಾ ಕೃತಿಯನ್ನು ಅದೇ ಹೆಸರಿನಲ್ಲಿ ಅನುವಾದಿಸಲಾಗಿದೆ. ಮರಾಠಿಯ ಗ್ರಾಮೀಣ ಪರಿಸರದ ಭಾಷೆಯನ್ನು ಕನ್ನಡೀಕರಿಸುವ ಸಂದರ್ಭದಲ್ಲಿಯೂ ಹಳ್ಳಿಯ ಸೊಗಡಿನ ಹಾಗೂ ಜನಾಂಗೀಯ ಭಾಷೆಯ ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MORE