‘ಕಂಪನ ಮಾಪನಗಳೇ ವಂದನೆ’ ಮಲಯಾಳಂ ಸಾಹಿತಿ ಸಿ.ರಾಧಾಕೃಷ್ಣನ್ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಕಾದಂಬರಿ. ಈ ಕೃತಿಯನ್ನು ನಾ. ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಿದ್ರಿಸುತ್ತಿರುವವರನ್ನು ಸಮಸ್ಯೆಯ ಕಡೆಗೆ ತುಡಿಯುವಂತೆ ಮಾಡಲು, ಎಚ್ಚರಗೊಳ್ಳುವಂತೆ ನೋಡಿಕೊಳ್ಳಲು ಸಾಹಿತಿಯಾದವನು ಸಕಲ ತಂತ್ರಗಳನ್ನೂ ಬಳಸುತ್ತಿರುತ್ತಾನೆ. ನಿಗೂಢವಾದ ಯುಗದ ಸಮಸ್ಯೆಯ ಕುರಿತು ನಮ್ಮನ್ನು ವೈಜ್ಞಾನಿಕವಾಗಿ ಅಸ್ವಸ್ಥರನ್ನಾಗಿಸಲೂ ಎಚ್ಚರಿಸಲೂ ಕಲಾತ್ಮಕವಾಗಿ ಸಂತೃಪ್ತರನ್ನಾಗಿಸಲೂ ಕಾದಂಬರಿಕಾರನಿಗೆ ಸಾಧ್ಯವಾಗುವುದು ಹೇಗೆ ಎಂಬುದನ್ನು ಸಿ.ರಾಧಾಕೃಷ್ಣನ್ ತಮ್ಮ ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಕೃತಿಯನ್ನು ಅನುವಾದಕ ನಾ. ದಾಮೋದರ ಶೆಟ್ಟಿ ಅವರು ಅಷ್ಟೇ ಸೂಕ್ಷ್ಮ ಪ್ರಜ್ಞೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ. ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್ ಆಫ್ ...
READ MORE