‘ಮಯ್ಯಾದಾಸನ ವಾಡೆ’ದು. ನಿಂ. ಬೆಳಗಲಿ ಅವರ ಅನುವಾದಿತ ಐತಿಹಾಸಿಕ ಕಾದಂಬರಿಯಾಗಿದೆ. ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಮಾಡಿದ ಘಟನೆಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಕಾದಂಬರಿಕಾರ ದು.ನಿಂ. ಬೆಳಗಲಿಯವರು (ಪೂರ್ಣ ಹೆಸರು: ದುರದುಂಡೇಶ್ವರ ನಿಂಗಪ್ಪ ಬೆಳಗಲಿ, ಜನನ: 30-03-1931) ಹುಟ್ಟಿದ್ದು ಬನಹಟ್ಟಿಯಲ್ಲಿ. ತಂದೆ ನಿಂಗಪ್ಪ. ತಾಯಿ ಚೆನ್ನಮ್ಮ, ಅಥಣಿ ತಾಲ್ಲೂಕಿನ ಐನಾಪುರ ಇವರ ಮೂಲ. ಬನಹಟ್ಟಿಯಲ್ಲಿ ನೆಲೆಸಿದ್ದರು. ಒಣಬಾಳೇ ದಿಂಡು ಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂಬ ಅಡ್ಡ ಹೆಸರಾಯಿತು. ತಾಯಿ ಜಾನಪದ ಕಥೆಗಳ ಹಾಡುಗಾರ್ತಿ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಶಾಲೆಯಲ್ಲಿ (1951-55) ಶಿಕ್ಷಕರಾದರು. ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ(1957) ಪ್ರಕಟ, ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಹಾಗೂ ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದರು. 1960 ರಲ್ಲಿ ಮೊದಲ ಕಾದಂಬರಿ ಮುಳ್ಳು ...
READ MOREಹೊಸತು-2002-ಮಾರ್ಚ್
ಬ್ರಿಟಿಷರು ಭಾರತದಲ್ಲಿ ತಮ್ಮ ನೆಲೆಗಳನ್ನು ಭದ್ರಪಡಿಸುತ್ತಿದ್ದ ಕಾಲದ ಐತಿಹಾಸಿಕ ಕಾದಂಬರಿ, ಯುದ್ಧಗಳ ಖಾಡಾಖಾಡಿ ಇಲ್ಲದಿದ್ದರೂ ಕುಯುಕ್ತಿಯಿಂದ ಹೊಂಚು ಹಾಕಿ ಆಡಳಿತವನ್ನು ತನ್ನ ಮುಷ್ಟಿಯಲ್ಲಿ ತೆಗೆದುಕೊಳ್ಳುತ್ತಿದ್ದ ಕಾಲ. ತಮ್ಮ ಜೀವನ ಶೈಲಿ- ಸಂಪ್ರದಾಯಗಳನ್ನು ಬಿಟ್ಟುಕೊಡಲು ಸುತರಾಂ ಸಿದ್ಧವಿಲ್ಲದ ಅಂದಿನ ಜನ, ರಾಜ್ಯಗಳು ಕೈಬಿಟ್ಟುಹೋದರೂ ಸಾಂಕೇತಿಕವಾಗಿಯಾದರೂ ಸಾಂಕೇತಿಕವಾಗಿಯಾದರೂ ಅವುಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದ ರೀತಿ ಇಲ್ಲಿ ಚಿತ್ರಿತವಾಗಿದೆ. ಎಂದಿನಂತೆ ಹಳೆಯ ಮೌಲ್ಯಗಳು ಚಲಾವಣೆ ಗಿಲ್ಲದ ನಾಣ್ಯಗಳಂತೆ ಉಳಿದುಬಿಡುತ್ತವೆ. ಸೊಗಸಾದ ಅನುವಾದ ಬೆಳಗಲಿಯವರದ್ದು.