ಖುಷ್ವಂತ ಸಿಂಗ್ ಅವರು ತಮ್ಮ ಮುಪ್ಪಿನ ಕಾಲಾವಧಿಯಲ್ಲಿ ಬರೆದ ಕಾದಂಬರಿ-ವೃದ್ಧ ಚಪಲದ ಸಂಜೆ. ಪತ್ರಕರ್ತ ರವಿ ಬೆಳೆಗೆರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ಜೀವನದ ಇಳಿಹೊತ್ತಿನಲ್ಲಿ ಏನೆನೆಲ್ಲ ಹರಟುತ್ತಾರೆ, ಒಂದಿಷ್ಟು ರಾಜಕೀಯ, ಒಂದಿಷ್ಟು ನೀತಿ, ಒಂದಿಷ್ಟು ಕಾಮ...ಹೀಗೆ ಘಟನೆಗಳ ಸರಮಾಲೆ ಹೆಣೆದಂತೆ, ನೆನಪುಗಳನ್ನು ಕೆದಕಿಕೊಳ್ಳುವ ಅವಕಾಶದಂತೆ ಇಲ್ಲಿಯ ಕಥಾ ವಸ್ತು ಮುಂದುವರಿದಿದೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಆಸಕ್ತಿಕರ ಘಟನೆಗಳ ಸ್ಮರಣೆ ಇತ್ಯಾದಿಗಳಿಂದ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE