ಹಿಮಾಂಶು ಜೋಶಿ ಅವರು ಹಿಂದಿಯಲ್ಲಿ (ಕಗಾರ್ ಕಿ. ಆಗ್) ಬರೆದ ಕಾದಂಬರಿ-ಅಂತಿಮ ಜ್ವಾಲೆ. ಕುಸುಮ ಗೀತ ಜೆ.ಎಸ್. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ (2009) ಲಭಿಸಿದೆ.
ಶೋಷಣೆಗೆ ಒಳಗಾದ ಜಗತ್ತಿನ ಎಲ್ಲ ಹೆಣ್ಣುಗಳ ಪ್ರತಿನಿಧಿ -ಗೋಮತಿ. ಕಾದಂಬರಿಯ ನಾಯಕಿ. ಬಡತನ, ದ್ವೇಷ, ಅಸೂಹೆ, ಶೋಷಣೆಗೆ ಇತ್ಯಾದಿ ಮೊದಲು ಬಲಿಯಾಗುವವಳೇ ಹೆಣ್ಣು. ಅವಮಾನ-ಹಿಂಸೆ-ನೋವು ನುಂಗಿ ಒಡಲಲ್ಲಿ ಅಗ್ನಿಯನ್ನೇ ತುಂಬಿಕೊಂಡಂತಿರುವ ಮಹಿಳೆಯ ದಾರುಣ ಕಥೆ ಇದು. ಅಂತಿಮಜ್ವಾಲೆ ಎನ್ನುವುದು ಆಕೆಯ ಕ್ರಾಂತಿಯ ಸಂಕೇತವೂ ಆಗಿದೆ ಎನ್ನುವುದನ್ನು ಗಮನಿಸಬಹುದು. .
ಲೇಖಕಿ, ಅನುವಾದಕಿ ಜೆ.ಎಸ್.ಕುಸುಮ ಗೀತ ಅವರು ಕನ್ನಡ ಹಾಗೂ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ರಾಮಚಂದ್ರ ಶುಕ್ಲ ಪ್ರಶಸ್ತಿ, ಸೌಹಾರ್ದ ಸಮ್ಮಾನ್, ವಿಶಿಷ್ಟ ಹಿಂದಿ ಸೇವೆ ಸಮ್ಮಾನ್, ವಿದ್ಯಾಸಾಗರ್ ಸಾರಸ್ವತ ಸಮ್ಮಾನ್, ಸಾಹಿತ್ಯ ಸೇವಾ ಸಮ್ಮಾನ್, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ, ಸಾಹಿತ್ಯ ವಾಚಸ್ಪತಿ, ಹಿಂದಿ ಶಿಖರ್ ಸಮ್ಮಾನ್, ಗಾರ್ಗಿ ಗುಪ್ತ ದ್ವಿವಾಗೀಶ್ ಮುಂತಾದ ಪ್ರಶಸ್ತಿಗಳು ಸಂದಿವೆ. ಕೃತಿಗಳು: ಮಹಾತ್ಮಗಾಂಧಿ ನನ್ನ ತಾತ, ಭಾಗ-1, ಒಂದು ಅರ್ಥಪೂರ್ಣ ಸತ್ಯ, ಅಂತಿಮ ಜ್ವಾಲೆ (ಕಾದಂಬರಿ ಅನುವಾದ) ...
READ MORE