ತಂದೆತಾಯಿಗಳಲ್ಲಿರುವ ಗುಣಾವಾಗುಣಗಳು,ಸಂಸ್ಕಾರಗಳು,ಮಕ್ಕಳಿಗೆ ಅನುವಂಶಿಕವಾಗಿ ಇಲ್ಲವೇ ಮಾದರಿಯಾಗಿ ಬರುತ್ತವೆ.ರೈಲ್ವೇ ಸ್ಟೇಷನ್ ಮಾಸ್ತರ್ ರಾಗಿದ್ದ ನಟರಾಜ್ ಅವರದು ನೆಮ್ಮದಿಯ ಸಂಸಾರ ಮೂರು ಹೆಣ್ಣುಮಕ್ಕಳು ಉಪಾಸನಾ, ಉತ್ಪಲ, ಉಷಾ, ಜನಾನುರಾಗಿಯಾದ ನಟರಾಜ್ ರ ಮನೆಗೆ ಶ್ರೀಮಂತ ಕಲಾವಿಧ ಅಲೋಕ ಅತಿಥಿಯಾಗಿ ಬರುತ್ತಾರೆ.ಉಪಾಸನಾ ಮತ್ತು ಅಲೋಕ್ ಮದ್ಯ ಆಕರ್ಷಣೆ ಉಂಟಾಗಿ ನಾನು ಅವನನ್ನೇ ಮದುವೆಯಾಗುವುದಾಗಿ ಹಠ ಮಾಡುತ್ತಾಳೆ,ಇದು ತಂದೆಗೂ ಇಷ್ಟವಾಗದೆ ಇದ್ದರೂ ಅವ್ರು ಅದನ್ನು ಕಟುವಾಗಿ ನಿರಾಕರಿಸದೇ 1 ತಿಂಗಳು ಗಡುವು ಕೊಟ್ಟು ಅಷ್ಟರೊಳಗೆ ಮದುವೆ ಮಾಡಿಕೊಂಡು ಹೋಗು,ಅಲ್ಲದೇ ತಿಂಗಳೊಳಗೆ ಮದುವೆಯಾಗದೆ ಹೋದರೆ ನಾವು ತೋರಿಸಿದ ಹುಡುಗನ್ನ ಮದುವೆ ಮಾಡಿಕೊಳ್ಳಬೇಕು ಎನ್ನುವ ಷರತ್ತು ಹಾಕುತ್ತಾರೆ.ಆದ್ರೆ ಮನಸಿಚ್ಛೆಯಂತೆ ನಡೆಯದ ಮದುವೆಯನ್ನು ಆಕೆ ನಿರಾಕರಿಸುತ್ತಾಳೆ .ಗಡುವು ಮುಗಿದು ತಂದೆಯ ಷರತ್ತಿನಂತೆ ಶರತ್ ನ ಕೈ ಹಿಡಿಯುತ್ತಾಳೆ.ಅಲೋಕ ನನ್ನು ಮನಸಾರೆ ಪ್ರೀತಿಸಿದ್ದ ಉಪಾಸನ ಶರತ್ನನ್ನು ಗಂಡನಾಗಿ ಒಪ್ಪಿಕೊಳ್ಳುವುದಿಲ್ಲ.ಉಪಾಸನಾಳ ವರ್ತನೆಗೆ ಕಾರಣ ತಿಳಿದ ಶರತ್ ಕೋಪಗೊಳ್ಳದೆ ಅವನು ಸಹ 1ತಿಂಗಳು ಗಡವು ನೀಡಿ ತೀರ್ಮಾನ ಕೈಗೊಳ್ಳಲು ಹೇಳುತ್ತಾನೆ.ಉಪಾಸನಾ ತೆಗೆದುಕೊಂಡ ತೀರ್ಮಾನ ವೇನು?ಅನ್ನೋದು ಕಾದಂಬರಿಯು ಒಳಗೊಂಡಿರವ ಕುತೂಹಲ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE