ಇದೊಂದು ಪ್ರೇಮಕಥೆ,ಈ ಕಾದಂಬರಿಯ ನಾಯಕಿ ಚಿತ್ರಾಳ ಪಾಲಿಗೆ ಸುದರ್ಶನ್ ‘ಬಾಂದಳದ ನಕ್ಷತ್ರ.’ ಬದುಕು ಒಂದು ಸುಳಿಯ ಹಾಗೆ.ಎಚ್ಚರ ತಪ್ಪಿದರೂ ಜೀವನವನ್ನು ಒಪ್ಪಿಸಿ ಬಿಡಬೇಕಾಗುತ್ತೆ.ಇದೊಂದು ನೊಂದ ಹೆಣ್ಣಿನ ಪತ್ರದ ಕೊನೆಯ ಎರಡು ಸಾಲುಗಳು.ಇದನ್ನು ಹೇಗೆ ಅರ್ಥೈಸುವುದು? “ಹೊರಗಡೆ ಮೂವ್ ಆಗುವ ಗಂಡಿನ ಜೀವನದಲ್ಲಿ ಅಭಿಮನಿಸುವ, ಆರಾಧಿಸುವ ಹೆಣ್ಣುಗಳ ಪ್ರವೇಶವಾಗಬಹುದು. ಅಂಥ ಸಂದರ್ಭಗಳಲ್ಲಿ ಜ್ಯೋತಿ ಅಂಥ ಹೆಣ್ಣುಗಳ ದಹನವಾಗಿ ಹೋಗುತ್ತೆ. ಪರೋಕ್ಷವಾಗಿಯಾದ್ರೂ ನೀವು ಜ್ಯೋತಿಯ ಸಾವಿಗೆ ಕಾರಣರು” ಡೈರಿ ಹಿಂದಿರುಗಿಸಿದ ನಾರಾಯಣ್ ಮಾತುಗಳು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE