ಮೂಕ ತೋಳ ಪ್ರಭಾಕರನ್ ಕೆ ಅವರು ಅನುವಾದಿಸಿರುವ ಮಲಯಾಳಂ ಕಾದಂಬರಿಯಾಗಿದೆ. ಮೂಲ ಜಯಮೋಹನ್ ಅವರದು. ಕಾದಂಬರಿಗಳಲ್ಲಿ ನಮಗೆ ಕೇರಳದ ಸಮಾಜ ಮತ್ತು ಅಲ್ಲಿನ ಪಲ್ಲಟಗಳು ಕಾಣುತ್ತವೆ. ಒಬ್ಬ ಮಹತ್ವದ ಲೇಖಕ ಇದನ್ನು ಮಾಡುತ್ತಾನೆ. ಸಮಾಜ ಮತ್ತು ಅದರ ಪಲ್ಲಟಗಳನ್ನು ಅವನು ಸೆರೆ ಹಿಡಿಯಬಲ್ಲವನಾಗಿರುತ್ತಾನೆ. ಕಾದಂಬರಿಯು ನಮಗೆ ವಸಾಹತುವಿನ ಅನುಭವವನ್ನು ಹೇಳುತ್ತದೆ.
ವೃತ್ತಿಯಿಂದ ಎಂಜಿನಿಯರ್ ಆಗಿರುವ ಕೆ. ಪ್ರಭಾಕರನ್ ಅವರು ಮೆಸ್ಕಾಮ್ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...
READ MORE