ಲೇಖಕ ಮೋಹನ ಕುಂಟಾರ್ ಅವರ ಮಲಯಾಳಂ ಭಾಷೆಯಿಂದ ಅನುವಾದಿತ ಕಾದಂಬರಿ-ಕುಂದಲತ. ಮೂಲ ಲೇಖಕರು ಅಪ್ಪು ನೆಡುಜಾಡಿ. ಪ್ರೇಮ ಮತ್ತು ಪ್ರಭುತ್ವದ ಮಧ್ಯೆ ಬಿಚ್ಚಿಕೊಳ್ಳುವ ಈ ಕಾದಂಬರಿಯು ಈ ಎರಡರ ಶ್ರೇಷ್ಠತೆಯನ್ನು ಹಾಗೂ ಪ್ರೇಮದ ಅತಿ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ವಿಷಯ ವಸ್ತುವಿನಲ್ಲಿ ಎರಡು ಪ್ರೇಮಕಥೆಗಳಿದ್ದು, ಯುದ್ಧ ವೃತ್ತಾಂತವೂ ಒಳಗೊಂಡಿದೆ. ಕುಂದಲತ ಎಂಬುದು ಮಲಯಾಳಂ ಸಾಹಿತ್ಯದ ಮೊದಲ ಕಾದಂಬರಿ ಎಂದೇ ಹೇಳಲಾಗುತ್ತಿದೆ. ಈ ಕಾದಂಬರಿಯ ವಿಷಯ ವಸ್ತು ಕಾಲ್ಪನಿಕ. ಆದರೆ, ಕಾಲಾತೀತವಾಗಿದೆ. ಸಾಹಿತಿ ಸಿ. ವೆಂಕಟೇಶ ಹಂಪಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಕಾದಂಬರಿ ಕುರಿತ ಪ್ರಸ್ತಾವನೆ ಮತ್ತು ಕಾದಂಬರಿ ಇವು ಲೇಖಕರ ಸಂಶೋಧನಾ ಪ್ರಜ್ಞೆ ಮತ್ತು ಅನುವಾದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ. ಕನ್ನಡ ಓದುಗರಿಗೆ ಮಲಯಾಳಂನ ಮೊದಲ ಕಾದಂಬರಿಯ ಕುರಿತು ಪರಿಚಯವನ್ನು ಲೇಖಕರು ಸಮರ್ಥವಾಗಿ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ. ...
READ MORE