ನಾವು ಅಂದುಕೊಂಡಂತೆ ಬದುಕು ಮುಂದುವರೆಯಲು ಸಾಧ್ಯವೇ? ಬದುಕು ನಡೆಸಿದಂತೆ ನಾವು ನಡೆಯಬೇಕು…! ಘಟಿಸುವ ಆಕಸ್ಮಿಕ ಘಟನೆಗಳು ಮುಂದುವರಿಕೆಯ ಮರುಹುಟ್ಟು ಪಡೆದರೆ ಮಾನಸಿಕವಾಗಿ ಕುಗ್ಗಿಬಿಡುವ ಪರಿಸ್ಥಿತಿ ವೈಯುಕ್ತಿಕ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಎಂದೂ ಪೂರಕವಾಗಿರುವುದಿಲ್ಲ… ಇಂತಹ ಚಿಕ್ಕಪುಟ್ಟ ವಸ್ತುಸ್ಥಿತಿಗಳ… ಅದನ್ನ ಅವಲಂಭಿಸಿರುವ ಮನಸ್ಥಿತಿಗಳ ಪೂರ್ಣಫಲವೇ ಈ “ಆನಂದಯಜ್ಞ.” ಎಂಬ ಈ ಕಾದಂಬರಿ ಈ ಕಾದಂಬರಿಯಲ್ಲಿ ತುಂಬಾ ಕಾಡಿದ ಪಾತ್ರಗಳಲ್ಲಿ ಒಂದು ಆನಂದಮೂರ್ತಿಗಳು… ಮತ್ತೊಂದು ಅಭಿನಂದನ್… ಇಬ್ಬರ ಯೋಚನೆ ಒಂದೇ ಆದರೆ ದಿಕ್ಕುಗಳು ಬೇರೆ… ಅವಲಂಭಿತ ಪರಿಸರಗಳು ಬೇರೆ…ಅನುಭವಿಸುವ ಹತಾಷೆಗಳಿಗೆ ಜೀವನದೃಷ್ಟಿ ಕೋನದಲ್ಲಿ ಕಂಡುಕೊಂಡ ಅನುಭವಗಳಾಗಬೇಕು… ಅದರಂತೆ ಅಮಲಳಿಂದ ಅರಿತ ಪಾಠವೆಂದರೆ “ಬದುಕಿನಲ್ಲಿ ಅಭಿಪ್ರಾಯಗಳನ್ನು ಬದಲಿಸಬಹುದು ಆದರೆ ನಿರ್ಧಾರಗಳನ್ನಲ್ಲ” …ಹೀಗೆ ಹಲವು ಮಹತ್ವದ ವಿಷಯಗಳನ್ನು ಈ ಕಾದಂಬರಿಯೂ ಓದುಗರಿಗೆ ತಿಳಿಯ ಪಡಿಸುತ್ತದೆ.ಬದುಕು ಒಂದು ಯಜ್ಞ… ಅದು ಆನಂದದೆಡೆಗಿನ ಯಜ್ಞ … ಬರುವ ನೋವು, ನಿರಾಸೆ, ಪರಿತಾಪ, ಒತ್ತಡ ಎಲ್ಲವನ್ನೂ ಮೀರಿ ನಿಂತು ಎಲ್ಲರಲ್ಲಿ ನಮ್ಮನ್ನು ಕಂಡುಕೊಳ್ಳುವುದೇ “ಆನಂದಯಜ್ಞ”…
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE