ಬಂಗಾಳಿ ಮೂಲದ ಹಿರಿಯ ಲೇಖಕಿ ಮಹಾಶ್ವೇತಾ ದೇವಿ ಅವರ ಕಾದಂಬರಿ ‘ರುಡಾಲಿ’. ಇದನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಣ್ಣುಮಕ್ಕಳನ್ನು ಕಟ್ಟಿಕೊಂಡು, ಇಟ್ಟುಕೊಂಡು ನಂತರ ಸಂಬಂಧ ಕಡಿದುಕೊಳ್ಳುವ ಹಣವುಳ್ಳವರು ಹುಟ್ಟು ಹಾಕಿದ ಅನಿಷ್ಟ ಪದ್ಧತಿ ರುಡಾಲಿ. ಸಾಮಾಜಿಕವಾಗಿ ಅಮಾನವೀಯವಾಗಿರುವ ಈ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದು ಕಾದಂಬರಿ ಉದ್ದೇಶ. ರುಡಾಲಿ ಪದ್ಧತಿಗೆ ಒಳಪಟ್ಟ ಹೆಣ್ಣು ಶನಿಚರಿ. ಈಕೆಯ ನೋವುಗಳನ್ನು ಅನಾವರಣಗೊಳಿಸುತ್ತದೆ. ಆದರೆ, ಪುರುಷ ಪ್ರಧಾನ ಸಮಾಜ ಮಾತ್ರ ಇದಕ್ಕೆ ಕಿವಿಗೊಡದು. ಉಳ್ಳವರು ಸತ್ತರೆ ಅವರ ಶವದ ಮುಂದೆ ಕುಳಿತು ರುಡಾಲಿ ಹೆಣ್ಣುಮಕ್ಕಳು ಅಳುವುದೂ ಸಹ ಪದ್ಧತಿಯ ಭಾಗವೇ ಆಗಿದೆ. ಇಂತಹ ಕ್ರೂರ ಪದ್ಧತಿಯನ್ನು ಕಾದಂಬರಿ ಮೂಲಕ ಅನಾವರಣಗೊಳಿಸಿದೆ. “ರುಡಾಲಿ” ಕಥೆಯು ಹಿಂದಿಯಲ್ಲಿ ಕಲ್ಪನಾ ಲಾಜ್ಮಿಯವರು ಚಲನಚಿತ್ರ ಮಾಡಿದ್ದಾರೆ. ಡಿಂಪಲ್ ಕಪಾಡಿಯಾ, ರಾಖಿ ಗುಲ್ಜಾರ್, ರಾಜ್ ಬಬ್ಬರ್ , ಅಮ್ಜದ್ ಖಾನ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗುಲ್ಜಾರ್ ಅವರು ಗೀತೆಗಳ ಸಾಹಿತ್ಯ ರಚಿಸಿದ್ಮದು, ಭೂಪೇನ್ ಹಝಾರಿಕಾ ಸಂಗೀತ ನಿರ್ದೇಶಿಸಿದ್ದಾರೆ.
ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ. ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...
READ MORE