ಬಂಗಾಳಿ ಕಥಾ ಸಾಹಿತ್ಯ ದಿಗ್ಗಜ ಶರಶ್ಚಂದ್ರ ಚಟರ್ಜಿ ಅವರು ಕಾದಂಬರಿ ‘ಕಾಶೀನಾಥ. ಇದನ್ನು ಸಿ.ಕೆ. ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಶೀನಾಥ ಮತ್ತು ಕಮಲಾ ದಂಪತಿಯ ಸಂಸಾರಿಕ ಜೀವನವು ಪ್ರತಿಯೊಬ್ಬ ದಂಪತಿಯ ಜೀವನವಾಗಿದೆ. ಅಲ್ಲಿಯ ಬೇಸರ, ನಿರಾಶೆ, ಸಂತಸ ಹೀಗೆ ಏನಿದ್ದರೂ ಸಹನೆಯೊಂದಿಗೆ ಎಲ್ಲವನ್ನೂ ನುಂಗಿಕೊಂಡು ಹೋದರೆ ಮಶಾತ್ರ ಜೀವನಕ್ಕೊಂದು ಅರ್ಥ ಎಂಬುದು ಕಾದಂಬರಿಯ ಸಂದೇಶ. ಕನ್ನಡ ಅನುವಾದಿತ ಕಾದಂಬರಿಗೆ ಮುನ್ನುಡಿ ಬರೆದ ನಾ. ಕಸ್ತೂರಿ ‘ಬಾಹ್ಯ ಪ್ರಪಂಚದ ಸುಂದರ -ಕ್ರೂರ ದೃಶ್ಯಗಳ ಬಗ್ಗೆ ಕಾದಂಬರಿ ಹೆಚ್ಚು ವಿವರಿಸಲು ಹೋಗುವುದಿಲ್ಲ. ಆದರೆ.ಅಂತರಂಗದ ಅಲ್ಲೋಲ-ಕಲ್ಲೋಲಗಳನ್ನು ಚಿತ್ರಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ. ಕೆ. ನಾಗರಾಜರಾವ್ ಅವರು 1915ರ ಜೂನ್ 12ರಂದು ಜನಿಸಿದರು. ತಂದೆ ಕೃಷ್ಣಮೂರ್ತಿ ರಾವ್ ಮತ್ತು ತಾಯಿ ಪುಟ್ಟಮ್ಮ..ತಂದೆ ವಿವಿಧೆಡೆ ವರ್ಗವಾಗುತ್ತಿರುವ ಪ್ರಯುಕ್ತ ಇವರ ಪ್ರಾಥಮಿಕ ಶಿಕ್ಷಣವು ವಿವಿಧಡೆಯಾಯಿತು. ಎಸ್.ಎಸ್.ಎಲ್.ಸಿ ಉತ್ತೀರ್ಣವಾಗಿದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ. ಇಂಟರ್ಮೀಡಿಯೆಟ್ನಲ್ಲಿ ಉತ್ತೀರ್ಣರಾದರೂ ಓದು ಮುಂದುವರಿಯದೇ ಮೈಸೂರು ಪ್ರೀಮಿಯರ್ ಮೆಟಲ್ ಕಾರ್ಖಾನೆಯಲ್ಲಿ. ಸಿಬ್ಬಂದಿ ನಿಯಂತ್ರಣ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು.ನಂತರ ಅದನ್ನು ತೊರೆದು, ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾ ಮಂದಿರದಲ್ಲಿ ವ್ಯವಸ್ಥಾಪಕರಾದರು. ಇಂಡಿಯನ್ ಮ್ಯೂಚುಯಲ್ ಲೈಫ್ ಅಸೋಸಿಯೇಷನ್ ಸಂಸ್ಥೆಗೂ ಸೇರಿದರು. ನಂತರ ಪತ್ರಿಕೋದ್ಯಮ ಸೇರಿದರು. ಕನ್ನಡ ಮತ್ತು ...
READ MORE