ನೊಬೆಲ್ ಪುರಸ್ಕಾರ (1881)ಪಡೆದ ಸ್ಪ್ಯಾನಿಷ್ ಭಾಷೆಯ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವಿಸ್ ಅವರ ಲೇಖನಗಳನ್ನು ಬಿದರಹಳ್ಳಿ ನರಸಿಂಹಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೀಸ್ ಲ್ಯಾಟಿನ್ ಅಮೆರಿಕಾದ ಕೊಲಂಬಿಯಾ ದೇಶದವನು. ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಈತನ ಒನ್ ಹಂಡ್ರಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿ ಪುರಾಣ ವರ್ತಮಾನಗಳನ್ನು ಒಟ್ಟೊಟ್ಟಿಗೆ ಬೆಸೆಯುವ ವಿನೂತನ ಶೈಲಿಯಲ್ಲಿ ಜಗದ್ವಿಖ್ಯಾತಿ ಪಡೆದಿದೆ. ಮಾಂತ್ರಿಕ ವಾಸ್ತವತೆಯನ್ನು ಸೃಷ್ಟಿಸುವಲ್ಲಿ ತನ್ನ ಪ್ರತಿಭಾ ಶಕ್ತಿಯನ್ನು ಸೂರೆಗೊಂಡಿರುವ ಮಾರ್ಕ್ವಿಸ್ ಪತ್ರಕರ್ತನಾಗಿಯೂ ಕೆಲಕಾಲ ಕೆಲಸ ಮಾಡಿದ್ದಾನೆ. ಆಧುನಿಕ ಸಾಹಿತ್ಯದ ಎಲ್ಲೆಯನ್ನು ವಿಸ್ತರಿಸಿದ ಅಪರೂಪದ ಲೇಖಕ ಮಾರ್ಕ್ವಿಸ್, ಜನಪ್ರಿಯತೆಗಳಿಸುವಂತ ಗಂಭೀರ ಸಾಹಿತ್ಯದ ನಿರ್ಮಾಣವೂ ಸಾಧ್ಯ ಎಂಬುದನ್ನು ಮಾರ್ಕ್ವಿಸ್ ಕೃತಿಗಳು ತೋರಿಸಿಕೊಟ್ಟಿವೆ. ಕನ್ನಡ ಓದುಗರಿಗೆ ಈಗಾಗಲೇ ಕುತೂಹಲ ಹುಟ್ಟಿಸಿರುವ ಮಾರ್ಕ್ವಿಸ್ ಸಾಹಿತ್ಯವನ್ನು ಈ ಕೃತಿಯಲ್ಲಿ ಪರಿಚಯಿಸಲು ಯತ್ನಿಸಿದ್ದಾರೆ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE