ಫ್ರೆಂಚ್ ಸಾಹಿತ್ಯದಲ್ಲಿ ದಂತಕಥೆಯೇ ಆದ ವಿಕ್ಟರ್ ಹ್ಯೂಗೋ ರಚಿಸಿದ ‘ಲೆ ಮಿಸರಾಬಲ್ಸ್’ (1862) ಎಂಬ ಕಾದಂಬರಿಯ ಆಂಗ್ಲಾನುವಾದವನ್ನು ಜೆ.ಎಲ್. ಫಾರ್ಜ ಎಂಬಾತ ಮಾಡಿದ್ದು, ಬೆಳ್ಳಾವೆ ನರಹರಿ ಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಪಾಪಿಯ ಪಾಡು.
ಅನ್ಯಾಯ ಎಸಗುವವರಿಗೆ ಕಠಿಣವಾದ ಶಿಕ್ಷೆ ನೀಡುವ ಬದಲು ಅವರನ್ನು ಸಮಾಜಮುಖಿಯಾಗುವಂತೆ ಮಾಡದಿದ್ದರೆ ಅದೂ ಸಹ ಅನ್ಯಾಯ ಎಸಗಿದಂತೆ ಎಂಬುದು ಬಹುಮುಖೀಯ ಕಥಾ ವಸ್ತುಗಳ ಪೈಕಿ ಇದು ಪ್ರಮುಖವಾದದ್ದು.
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅನ್ಯಾಯ, ದುರ್ನಡತೆ, ದ್ರೋಹ-ವಂಚನೆ ಹೀಗೆ ಮಾನವ ಸ್ವಭಾವಗಳ ಸರಿಪಡಿಸುವಿಕೆಯೇ ಸಮಾಜದ ಧ್ಯೇಯವಾಗಬೇಕು ಎಂದೂ ಇಲ್ಲಿ ಪ್ರತಿಪಾದಿಸಲಾಗಿದೆ. ಈ ಕಾದಂಬರಿಯಲ್ಲಿ ಕರುಣಾ ರಸವಿದೆ. ಪ್ರತಿ ಸಾಲೂ ಸತ್ಯ -ಅಹಿಂಸೆ ಪ್ರತಿಪಾದಿಸುತ್ತದೆ. ಪ್ರೌಢ ವಾಕ್ ಸರಣಿಯೂ ಇದೆ. ಹೀಗಾಗಿ, 1862ರಲ್ಲಿ ಈ ಕಾದಂಬರಿಯು ಒಂದೇ ದಿನ 12 ಭಾಷೆಗಳಲ್ಲಿ ಅನುವಾದಗೊಂಡಿತ್ತು.
ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...
READ MORE