ಮರಾಠಿ ಸಾಹಿತ್ಯ ದಿಗ್ಗಜ ನರಸಿಂಹ ಚಿಂತಾಮಣಿ ಕೇಳಕರ್ ಅವರ ಕಾದಂಬರಿಯನ್ನು ಲೇಖಕ ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಕುಣ ಕ್ಯಾ ಅಥವಾ ಕೊಂಕಣದ ಪೋರ. ಮಹಾರಾಷ್ಟ್ರ ಹಾಗೂ ಕರಾವಳಿಯ ನೌಕಾಶಕ್ತಿ ಸಾಮರ್ಥ್ಯ ವನ್ನು ಚಿತ್ರಿಸುವ ಕಥೆ ಒಳಗೊಂಡಿರುವ ಈ ಕಾದಂಬರಿಯು ನೌಕಾದಳ ಸಿಬ್ಬಂದಿ ಜೀವನ, ಜಲಯುದ್ಧ ಸಮಯದಲ್ಲಿ ಅವರ ಬದುಕನ್ನು ಹಾಗೂ ಮಹಾರಾಷ್ಟ್ರಿಗರ ಶೌರ್ಯ ಸಾಹಸವನ್ನೂ ಹೃದಯಂಗಮವಾಗಿ ಚಿತ್ರಿಸಿದೆ.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE