ನೆಲ,ಸ್ವಂತ ಮನೆಯ ಕನಸು ನಾಲ್ಕು ಜನ ಕೂಡಿದ ಕಡೆಯಲ್ಲೆಲ್ಲ ಪ್ರಸ್ತಾಪವಾಗಿ ಬಿಡುವ ವಿಚಾರ.ಮಧ್ಯಮ ದರ್ಜೆಯ ಜನರಲ್ಲಿ ಇದೊಂದು ಅದ್ಭುತವಾದ ಕನಸು.ಅನುಭವ ವಿಸ್ತಾರಗೊಂಡು ವಿಚಾರ ವಿನಿಮಯಗಳು ಅತ್ಯಂತ ಭರಾಟೆಯಿಂದ ನಡೆಯುತ್ತಿತ್ತು. ಇಲ್ಲಿ ಸೋಲು-ಗೆಲುವುಗಳ ಮಿಶ್ರಣಗಳ ಜೊತೆ ಅಚ್ಚರಿಯ ಕೂಡ ಬುದ್ಧಿವಂತಿಕೆಯ ಪ್ರದರ್ಶನವಿರುತ್ತಿತ್ತು.ಒಮ್ಮೆ ಈ ವಸ್ತುವನ್ನು ಇಟ್ಟುಕೊಂಡು ಪುಟ್ಟ ಕವನ ಬರೆದರೆ ಹೇಗೆಂದು ಯೋಚಿಸಿ ಲೇಖನಿ ಹಿಡಿದಾಗ, ಅದು ಮೊದಲು ಆಗಿದ್ದು ಕತೆ ನಂತರ ಕಾದಂಬರಿಯಾಗಿ ರೂಪುಗೊಂಡಿದ್ದೇ ‘ರಜತನಂದನ’ಅನ್ನೋದು ಕಾದಂಬರಿಕಾರ್ತಿಯ ಮಾತು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE