ಈ ಕಾದಂಬರಿಯು ಅದು ಸೊರಗಿ ನೆಲಕ್ಕುರುಳಿದ ಗುಲಾಬಿ ಕಡ್ಡಿಗಳು ಅವಳೆದೆಗೆ ಹಚ್ಚಿದ ಬೆಂಕಿ. ಇಂದಿನವರೆಗೂ ಹೊಗೆಯಾಡುತ್ತಲೇ ಇತ್ತು. ಎಂದಾದರೂ ಬಲವಾಗಿ ಗಾಳಿ ಬೀಸಿದರೆ ಧಗ್ಗನೆ ಹತ್ತಿ ಉರಿಯಬಹುದು. ಅದರ ತಾಪದಿಂದ ಇಡೀ ಪರಿಸರ ಹತ್ತಿ ಉರಿಯಬಹುದು. ಆ ಉರಿಯಲ್ಲಿ ಅವಳನ್ನು ತಳ್ಳಿ ನರೇಂದ್ರ ದೂರ ಉಳಿಯಬಹುದು! ಅದಕ್ಕೊಂದು ಪರಿಹಾರ! ಸುಡು ಬೇಸಿಗೆಯ ಪ್ರಕ್ಷುಬ್ಧ ವಾತಾವರಣವನ್ನು ತನ್ನ ಶೀತಲ ಕಿರಣಗಳಿಂದ ತಂಪುಗೊಳಿಸಲು ಶುಭ್ರ ಆಕಾಶದಲ್ಲಿ ಶಶಿ ಮೂಡಿಬಂದಿದ್ದ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE