ಬದಲಾದ ಜನರ ಅಭಿರುಚಿ,ಜೀವನಶೈಲಿಯ,ಯಾಂತ್ರಿಕ ಜೀವನದ ನಡುವೆ ಹೆಚ್ಚು ಓದದ, ಶ್ಯಾನುಭೋಗರ ಮಗಳು ವಿಭಿನ್ನವಾಗಿ ಕಾಣುತ್ತಾಳೆ. ಬೆರಳಂಚಿನಲ್ಲಿ ಮಿನುಗುವ ಮೊಬೈಲ್. ಅದರಲ್ಲಿ ಬಾಯ್ಫ್ರೆಂಡ್ನ ಮೈ ಜುಮ್ಮೆನಿಸುವ ಸಂದೇಶ. ವ್ಯಾನಿಟಿ ಬ್ಯಾಗೊಳಗೆ ಕೂತ ಐಪಾಡಿನಲ್ಲಿ ಹಿಂದಿ ಹಾಡು. ಪ್ಯಾಂಟ್ ಕಿಸೆಯಲ್ಲಿರುವ ಪೆನ್ಡ್ರೈವ್ನಲ್ಲಿ ಹಾಲಿವುಡ್ ಮೂವಿ. ಹೆಗಲೇರಿ ಕೂತ ಲ್ಯಾಪ್ಟಾಪ್ನಲ್ಲಿ ಆಫೀಸ್ ಅಸೈನ್ಮೆಂಟ್. ನಿನ್ನ ಬಿಜಿ ಲೈಫ್ನಲ್ಲೊಂದು ನಿನ್ನದೇ ಜಗತ್ತು. ಬೇರೆಯದಕ್ಕೆ ಪ್ರತಿಕ್ರಿಯಿಸಲು ಪುರಸೊತ್ತು ಇಲ್ಲ! ತೀರಾ ಓದದ ಮುಗ್ಧ ಹೆಣ್ಣು ಶ್ಯಾನುಭೋಗರ ಮಗಳು ಸುತ್ತಲಿನ ಪರಿಸರ, ಹತ್ತಿರದ ಸಂಬಂಧಗಳಿಗೆ ಹೇಗೆ ಸ್ಪಂದಿಸುತ್ತಾಳೆ, ನಡೆದ ಅನ್ಯಾಯಕ್ಕೆ ಅವಳು ತೋರುವ ಪ್ರತಿಭಟನೆ ಎಷ್ಟೊಂದು ಅದ್ಭುತ!
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE