ಪೆರುಮಾಳ್ ಮುರುಗನ್ ಅವರು ತಮಿಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ಕೆ.ನಲ್ಲತಂಬಿ ಅವರು ಅರ್ಧನಾರೀಶ್ವರ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತುಂಬಾ ವಿವಾದ ಸೃಷ್ಟಿಸಿದ ಕಾದಂಬರಿ ಇದು. ಕಾಳಿ-ಪೊನ್ನ ಎಂಬ ದಂಪತಿಗೆ ಮಕ್ಕಳಾಗಲಿಲ್ಲ ಎಂಬುದು ಹಾಗೂ ಅದೇ ಬಹುದೊಡ್ಡ ವಿಷಯವಾಗಿ ಕಾದಂಬರಿಯೊಂದನ್ನು ನಡೆಸಿಕೊಂಡು ಹೋಗುವ ರಭಸ ಈ ಕೃತಿಯ ಗಟ್ಟಿತನವಾಗಿದೆ.
ನಿಯೋಗ ಪದ್ಧತಿ ಎಂಬುದು ಪುರಾಣದ ಕಥೆಗಳಲ್ಲಿ ಹೊಸದಲ್ಲ. ಆದರೆ, ಈ ಪದ್ಧತಿಯನ್ನು ಸಾಮಾಜಿಕವಾಗಿ ಬಹಿರಂಗ ಒಪ್ಪಿಗೆಗೆ ವಿರೋಧವೇ ಇದೆ. ಪತಿಯಿಂದ ಮಕ್ಕಳಾಗದಿದ್ದರೆ ಆ ಹೆಣ್ಣು ತನಗಿಷ್ಟವಾದ ಗಂಡಿನೊಂದಿಗೆ ಕೂಡಬಹುದು ಎಂಬುದು ನಿಯೋಗ ಪದ್ಧತಿಯ ಮೂಲ ಅಂಶ. ಪ್ರಸ್ತುತ ಸಂದರ್ಭದಲ್ಲಿ, ಈ ನಿಯೋಗ ಪದ್ಧತಿಯ ನಿಯಮಗಳು ಜಾತಿ, ಲಿಂಗ, ಪಿತೃಪ್ರಧಾನ ವ್ಯವಸ್ಥೆ ಇತ್ಯಾದಿ ಹಿನ್ನೆಲೆಯಲ್ಲಿ ಹೇಗೆ ತೊಡಕಾಗುತ್ತವೆ ಎಂಬುದೂ ಈ ಕಾದಂಬರಿಯ ಗಮನಾರ್ಹ ಅಂಶ. .ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಕಾದಂಬರಿ ಹುಟ್ಟು ಹಾಕುತ್ತಿದೆ.
ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...
READ MORE