ಹಿಂದೆ ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ಮಾತೊಂದಿತ್ತು. ಆದರೆ ಈಗ ವಧು-ವರರ ಮಾಹಿತಿ ಕೇಂದ್ರ, ಆನ್ಲೈನ್ ಮ್ಯಾರೇಜ್ ಬ್ಯೂರೋಗಳ ಮೂಲಕ ಮದುವೆಗಳು ನಡೆಯುತ್ತೆ. ವಿವಾಹವೆನ್ನುವ ಕಲ್ಪನೆ ಯುವ ಜನತೆಯಲ್ಲಿ ಬೇರೆ ರೂಪ ತಾಳುತ್ತಿದ್ದು , ಒಂದು ಮಾಹಿತಿ ಪ್ರಕಾರ ವಿವಾಹವಾಗುತ್ತಿರುವವರ ಸಂಖ್ಯೆಗಿಂತ ವಿಚ್ಛೇದಿತರ ಸಂಖ್ಯೆ ಹೆಚ್ಚಾಗುತ್ತಿದೆ! ಇದಕ್ಕೆ ಕಾರಣವೇನು? ಯುವ ಜನತೆ ಹೆಚ್ಚು ಪ್ರಬುದ್ಧರಾಗುತ್ತಿರುವುದು ಕಾರಣವಾ? ಕಾರನದ ಪಟ್ಟಿ ದೊಡ್ಡದಾಗಬಹುದು. ನಾನು ‘ಭಾವ ಸರೋವರ’ ಕಾದಂಬರಿ ಬರೆದಾಗ ‘ಹಕ್ಕು, ಅಧಿಕರ ಇಲ್ಲದ ಜೊತೆಗಾರ’ನ ಜೊತೆ ವಾಸಿಸುವುದು ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಈಗ ‘ಲಿವಿಂಗ್-ಟು-ಗೆದರ್’, ‘ಲೀವ್-ಇನ್-ರಿಲೇಷನ್’ - ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಆಗ ಇಂಥ ಸಂಬಂಧ, ತಾಯ್ತನ ತಪ್ಪಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ಕಾದಂಬರಿಗಾರ್ತಿ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE